ಸ್ವತಃ ಅಕ್ಷಯ್ ಕುಮಾರ್ ಅವರೇ ನನ್ನೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿದ್ದರು. ಪ್ರತೀ ಬಾರಿ ಪರಿಸ್ಥಿತಿಗಳನ್ನು ವಿಚಾರಿಸಿ, ಮಾಹಿತಿ ಪಡೆದುಕೊಳ್ಳುತ್ತಿದ್ದರು. ಸುಕ್ಮಾ ದಾಳಿ ಬಗ್ಗೆ ನಾನು ಅಕ್ಷಯ್ ಅವರ ಬಳಿ ಹೇಳುತ್ತಿದ್ದಂತೆಯೇ ಹುತಾತ್ಮ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದಾಗಿ ಹೇಳಿದರು. ಯೋಧರ ಬಗ್ಗೆ ಅವರಿಗಿರುವ ಭಾವನೆಗಳಿಗೆ ನಾವು ಎಂದಿಗೂ ಕೃತಜ್ಞರಾಗಿರುತ್ತೇವೆಂದು ಡಿಐಜಿ ಲೋಧಾ ಅವರು ಹೇಳಿದ್ದಾರೆ.