ಇನ್ನೊಂದು ಸುದ್ದಿ ಸಂಸ್ಧೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಉಗ್ರಗಾಮಿಗಳು ಮೌಲಾನಾ ಸೈಯದ್ ಅತರ್ ದೆಹ್ಲವಿ ಎಂಬ ದೆಹಲಿ ಮೂಲದ ಮುಸ್ಲಿಂ ಪಾದ್ರಿಯ ಖಾಸಗಿ ಭದ್ರತಾ ಅಧಿಕಾರಿ ಬಳಿಯಿಂದ ಎಕೆ-47 ರೈಫಲ್ ನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಭದ್ರತಾ ಅಧಿಕಾರಿ ಮೊಹಮ್ಮದ್ ಹನೀಫ್ ಮೇಲೆ ಮೆಣಸಿನ ಪುಡಿ ಎಸೆದು ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡರು ಎನ್ನಲಾಗಿದೆ.