ಈ ಕುರಿತಂತೆ ಮಾತನಾಡಿರುವ ಅವರು, ನನಗೆ ಬಹಳ ಸಂತಸವಾಗುತ್ತಿದೆ. ಇಂದು ಬೆಳಿಗ್ಗೆ ಸುಷ್ಮಾ ಸ್ವರಾಜ್ ಅವರು ನನಗೆ ಕರೆ ಮಾಡಿದ್ದರು. ಉಜ್ಮಾ ವಾಘಾ ಗಡಿ ದಾಟಿರುವುದಾಗಿ ತಿಳಿಸಿದರು. ಆದರೆ, ಯಾವ ಸಮಯಕ್ಕೆ ಆಕೆ ಭಾರತಕ್ಕೆ ಬಂದಳು ಎಂಬುದನ್ನು ಹೇಳಲಿಲ್ಲ. ಇಷ್ಟು ಬೇಗ ಈ ರೀತಿ ಬೆಳವಣಿಗೆಗಳು ಆಗುತ್ತವೆ ಎಂದು ತಿಳಿದಿರಲಿಲ್ಲ. ಭಾರತ ಸರ್ಕಾರ ನಮಗೆ ಬಹಳ ಸಹಾಯವನ್ನು ಮಾಡಿದೆ. ಈ ಮೂಲಕ ಸುಷ್ಮಾ ಸ್ವರಾಜ್ ಹಾಗೂ ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳುತ್ತೇನೆಂದು ಹೇಳಿದ್ದಾರೆ.