ಶುಕ್ರವಾರ ರಾತ್ರಿ ಪೋಯಸ್ ಗಾರ್ಡನ್ ನಿವಾಸದ ಮೇಲೆ ಐಟಿ ಅಧಿಕಾರಿಗಳ ದಾಳಿಯನ್ನು ಹಿನ್ನಲೆಯಾಗಿಟ್ಟುಕೊಂಡು ಮಾತನಾಡಿದ ಸಿಎಂ ಪಳನಿಸ್ವಾಮಿ, ಟಿಟಿವಿ ದಿನಕರನ್ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಸಿಎಂ ಆಗಿದ್ದು ಎಐಎಡಿಎಂಕೆ ಶಾಸಕರ ಬೆಂಬಲದಿಂದಾಗಿಯೇ ಹೊರತು ಟಿಟಿವಿ ದಿನಕರನ್ ನಿಂದಲ್ಲ. ಇಷ್ಟಕ್ಕೂ ಯಾರು ಈ ದಿನಕರನ್...10 ವರ್ಷಗಳಿಂದ ಪಕ್ಷದಿಂದ ದೂರವಿದ್ದ ಈತ ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರಿದ್ದ. ಇದೀಗ ಪಕ್ಷದಿಂದ ಆತನನ್ನು ಹೊರಹಾಕಲ್ಪಟ್ಟಿದ್ದು, ಆತನಿಗೂ ಎಐಎಡಿಎಂಕೆ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.