ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರೊಂದಿಗೆ ಸುಷ್ಮಾನಿರಂತರ ಸಂಪರ್ಕದಲ್ಲಿದ್ದರು. ತಡರಾತ್ರಿ 2.30ಕ್ಕೆ ಅಕ್ಬರುದ್ದೀನ್ ಕರೆ ಮಾಡಿ ಭಂಡಾರಿ ಚುನಾಯಿತರಾಗಿರುವುದನ್ನು ದೃಢಪಡಿಸಿದರು. ಕೂಡಲೇ ಅವರು, ‘ವಂದೇ ಮಾತರಂ, ಜೈಹಿಂದ್’ ಎಂದು ಟ್ವೀಟ್ ಮಾಡಿ ಭಾರತದ ಗೆಲುವನ್ನು ಘೋಷಿಸಿದರು. ಆ ಮೂಲಕ ದಲ್ವೀರ್ ಭಂಡಾರಿ ಅವರ ಗೆಲುವು ಸ್ಪಷ್ಟವಾಗಿತ್ತು.