ಅಹಮದಾಬಾದ್: ಗುಜರಾತ್ ನಲ್ಲಿ ಗರ್ಭಾ ನೃತ್ಯದಲ್ಲಿ ಭಾಗವಹಿಸಿದ್ದ ಯುವಕನನ್ನು ಥಳಿಸಲಾಗಿದ್ದು, ಯುವಕ ಸಾವನ್ನಪ್ಪಿರುವ ಘಟನೆ ಆನಂದ್ ಜಿಲ್ಲೆಯಲ್ಲಿ ನಡೆದಿದೆ.
ಪ್ರಕರಣದ ಸಂಬಂಧ ಪಟೇಲ್ ಸಮುದಾಯದ 8 ಯುವಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಭಾನುವಾರ (ಅ.1 ರಂದು) ಈ ಘಟನೆ ನಡೆದಿದ್ದು, ಜಯೇಶ್ ಸೋಲಂಕಿ ಹಾಗೂ ಪ್ರಕಾಶ್ ಸೋಲಂಕಿ ಎಂಬ ಯುವಕರು ಹಾಗೂ ಇನ್ನಿಬ್ಬರು ದಲಿತ ಯುವಕರು ಗರ್ಭಾ ನೃತ್ಯ ನಡೆಯುತ್ತಿದ್ದ ದೇವಾಲಯದ ಬಳಿ ಕುಳಿತಿದ್ದರು. ದಾಳಿ ನಡೆಸಿದ್ದವರ ಪೈಕಿ ಇದ್ದ ಓರ್ವ ಯುವಕ ದಲಿತರ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾನೆ ಎಂದು ಪೊಲೀಸರಿಗೆ ನೀಡಲಾಗಿರುವ ದೂರಿನಲ್ಲಿ ದೂರುದಾರರು ತಿಳಿಸಿದ್ದಾರೆ.
ತಮಗೆ ಬಂದಿರುವ ದೂರಿನ ಮಾಹಿತಿಯನ್ನು ನೀಡಿರುವ ಪೊಲೀಸರು, "ದಲಿತರಿಗೆ ಗರ್ಭಾ ನೃತ್ಯ ನೋಡಲು ಅಧಿಕಾರವಿಲ್ಲ ಎಂದು ಅವಹೇಳನಕಾರಿಯಾಗಿ ಮಾತನಾಡಿ, ಇತರ ಯುವಕರನ್ನು ಕರೆದಿದು ದಲಿತ ಯುವಕರನ್ನು ಥಳಿಸಿದ್ದಾರೆ. ಥಳಿತಕ್ಕೊಳಗಾದ ಯುವಕನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕಿ ಉಳಿಯಲಿಲ್ಲ.