ಬಹರಾಯಿಚ್: ಉತ್ತರ ಪ್ರದೇಶದ ಸರಯೂ ನದಿಯಲ್ಲಿ ದೋಣಿ ಮುಳುಗಿದ ಪರಿಣಾಮ ನಾಲ್ವರು ಮಕ್ಕಳು ಸೇರಿ ಆರು ಜನ ಮೃಅತಪಟ್ಟಿದ್ದಾರೆ.
ಬಹರಾಯಿಚ್ ಜಿಲ್ಲೆಯ ಬೆಹ್ತಾದಲ್ಲಿ ಸರಯೂ ನದಿಯಲ್ಲಿ ಈ ದುರ್ಘಟನೆ ನಡೆದಿದ್ದು ಹತ್ತಿರದ ರಾಮ್ಗಾಂವ್ಗೆ ಜಾತ್ರೆಗೆಂದು ತೆರಳಿದ್ದವರು ಹಿಂತಿರುಗುವ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಒಂಭತ್ತು ಮಂದಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ಅದರಲ್ಲಿ ಮೂವರು ಈಜಿ ದಡ ಸೇರಿದ್ದಾರೆ.
ಮೃಅತಪಟ್ಟವರನ್ನು ರಾಜೇಶ್(25),ಬ್ರಿಜೇಶ್(20),ಮಗನ್(17),ವಿಜಯ್(16),ತಿರಿತ್(12) ಹಾಗೂ ಶಕಿಲ್(12) ಎಂದು ಗುರುತಿಸಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಕಳೆದ 1 ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ಸಂಭವಿಸಿದ ಎರಡನೇ ದೋಣಿ ದುರಂತ ಇದಾಗಿದೆ. ಸೆ.14 ರಂದು ಯಮುನಾ ನದಿಯಲ್ಲಿ ದೋಣಿ ಮುಳುಗಿ 22 ಮಂದಿ ನೀರು ಪಾಲಾಗಿದ್ದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.ಸಂತ್ರಸ್ತರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.