ಆಮ್ ಆದ್ಮಿ ಪಕ್ಷದ ಯುವ ಮುಖಂಡರೊಬ್ಬರು ಕಾರನ್ನು ಬಳಸುತ್ತಿದ್ದಾಗ ಕಾರು ಕಳುವಾಗಿದೆ. ಕೇಜ್ರಿವಾಲ್ ಅವರಿಗೆ ಈ ಕಾರು ಬಳುವಳಿಯಾಗಿ ಬಂದಿತ್ತು. ಕೇಜ್ರಿವಾಲ್ ಕಾರು ಸೇರಿದಂತೆ ಈ ವರ್ಷದಲ್ಲಿ ದೆಹಲಿಯಲ್ಲಿ ಸರಿಸುಮಾರು 30,449 ವಾಹನಗಳು ಕಳವಾಗಿವೆ. ದೆಹಲಿ ಚುನಾವಣೆಗೂ ಮುನ್ನ ಕೇಜ್ರಿವಾಲ್ ಅವರು ಈ ಕಾರನ್ನು ಬಳಸುತ್ತಿದ್ದರು. ನಂತರ ದೆಹಲಿ ಮುಖ್ಯಮಂತ್ರಿಯಾದ ಬಳಿಕ ಈ ಕಾರನ್ನು ರಹಟಕ್ ಅಭ್ಯರ್ಥಿ ನವೀನ್ ಜೈಹಿಂದ್ ಗೆ ಪ್ರಚಾರಕ್ಕಾಗಿ ಈ ಕಾರನ್ನು ನೀಡಿದ್ದರು.