ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಾರ್ಖಾಂಡ್ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಸರ್ಯೂ ರಾಯ್ ಅವರು, ಸುಪ್ರೀಂಕೋರ್ಟ್ ಆದೇಶದ ಪ್ರತಿಯೊಂದಿಗೆ ನಾನು ಸ್ಪಷ್ಟವಾಗಿ ನಿರ್ದೇಶನವನ್ನು ಈ ಹಿಂದೆಯೇ ನಾನು ನೀಡಿದ್ದೆ. ಪಡಿತರ ಚೀಟಿಯೊಂದಿಗೆ ಯಾರು ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲವೋ ಅವರಿಗೆ ರೇಷನ್ ನೀಡಲಾಗುವುದು ಹಾಗೂ ಯಾರು ಆಧಾರ್ ಕಾರ್ಡ್ ನ್ನು ಪಡೆದುಕೊಂಡಿಲ್ಲವೊ ಅವರಿಗೆ, ಪರಿಶೀಲನೆ ಬಳಿಕ ರೇಷನ್ ನೀಡಲಾಗುತ್ತದೆ ಎಂದು ಹೇಳಿದ್ದೆ. ಪಡಿತರ ಚೀಟಿಯಿಂದ ಉಂಟಾಗ ಸಮಸ್ಯೆಗಳಿಂದ ಯಾರಾದರೂ ಸಾವನ್ನಪ್ಪಿದ್ದರೆ, ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.