ತಮ್ಮ ಕಕ್ಷಿದಾರರಿಗೆ ಪ್ರತಿಕ್ರಿಯೆಯನ್ನೂ ನೀಡುವುದಕ್ಕ ಅವಕಾಶ ನೀಡದೇ ಆತುರದಲ್ಲಿ ದಿ ವೈರ್ ಸುದ್ದಿ ಜಾಲತಾಣ ವರದಿಯನ್ನು ಪ್ರಕಟಿಸಿದೆ. ವರದಿಯ ಉದ್ದೇಶ ಇದ್ದದ್ದು ಸತ್ಯವನ್ನು ಹೊರತರುವುದಲ್ಲ, ಬದಲಾಗಿ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ವಿಷಯವನ್ನು ಸೃಷ್ಟಿಸುವುದು ಎಂದು ಜಯ್ ಶಾ ಪರ ವಕೀಲ ಎಸ್ ವಿ ರಾಜು ವಾದ ಮಂಡಿಸಿದ್ದಾರೆ.