ಮುಂಬೈ ನಲ್ಲಿ ಬೆಂಗಳೂರು ಮೂಲದ ಸಂಗೀತಗಾರ ಆತ್ಮಹತ್ಯೆ

ಬೆಂಗಳೂರು ಮೂಲದ ಸಂಗೀತಗಾರನೊಬ್ಬ ಮುಂಬೈ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆ
ಆತ್ಮಹತ್ಯೆ
ಮುಂಬೈ: ಬೆಂಗಳೂರು ಮೂಲದ ಸಂಗೀತಗಾರನೊಬ್ಬ ಮುಂಬೈ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 
29 ವರ್ಷದ ವ್ಯಕ್ತಿ 12 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತನನ್ನು ಕರಣ್ ಜೋಸೆಫ್ ಎಂದು ಗುರುತಿಸಲಾಗಿದೆ. ಸ್ನೇಹಿತ ರಿಷಿ ಷಾ ಕೆಲಸ ಮಾಡುವ ಕಂಪನಿಯ ಫ್ಲಾಟ್ ನ ಕಿಟಕಿಯಿಂದ ಜಿಗಿದು ಕರಣ್ ಜೋಸೆಫ್ ಆತ್ಮಹೆತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 
ಕಳೆದ ಒಂದು ತಿಂಗಳಿನಿಂದ ಸ್ನೇಹಿತನ ಫ್ಲಾಟ್ ನಲ್ಲೇ ಇದ್ದ ಕರಣ್ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿ ಪಂಡಿತ್ ಠಾಕ್ರೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com