ನವದೆಹಲಿ:ಯೂನಿಫಾರ್ಮ್ ಧರಿಸಿಲ್ಲವೆಂಬ ಕಾರಣಕ್ಕೆ 11 ವರ್ಷದ ಶಾಲಾ ಬಾಲಕಿಯನ್ನು ಬಾಲಕರು ಉಪಯೋಗಿಸುವ ಶೌಚಾಲಯದೊಳಗೆ ನಿಲ್ಲಿಸಿ ಶಿಕ್ಷಿಸಿದ ಘಟನೆಯ ಸಂಪೂರ್ಣ ವಿವರಗಳನ್ನು ತೆಲಂಗಾಣ ಸರ್ಕಾರದ ಸಚಿವ ಕೆ.ಟಿ.ಆರ್ ಕೇಳಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯಿಂದ ಬಂದ ಮಾಹಿತಿ ಪ್ರಕಾರ ತೆಲಂಗಾಣ ರಾಷ್ಟ್ರ ಸಮಿತಿಯ ನಾಯಕರಾಗಿರುವ ಕಲ್ವಾಕುಂಟಾ ತಾರಕ ರಾಮ ರಾವ್ ಟ್ವಿಟ್ಟರ್ ನಲ್ಲಿ, ಬಾಲಕಿಗೆ ಶಿಕ್ಷಕಿ ನೀಡಿದ ಶಿಕ್ಷೆ ಹಾಸ್ಯಾಸ್ಪದವಾಗಿದ್ದು, ಸಂಪೂರ್ಣವಾಗಿ ಅಮಾನವೀಯವಾಗಿದೆ ಎಂದು ಹೇಳಿದ್ದಾರೆ.
ಶಾಲೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಉಪ ಮುಖ್ಯಮಂತ್ರಿಯವರ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.
Advertisement