ಎಲ್ಲವನ್ನೂ ಕಳೆದುಕೊಂಡಿರುವ ಜನರನ್ನು ಗಡಿಪಾರು ಮಾಡುವುದು ಮಾನವೀಯತೆಯೇ? ಇದು ತಪ್ಪು. ಭಾರತದಲ್ಲಿರುವ ಎಲ್ಲಾ ರೊಹಿಂಗ್ಯಾ ಮುಸ್ಲಿಮರನ್ನೂ ಅವರ ದೇಶಕ್ಕೆ ಯಾವ ಕಾನೂನಿನ ಆಧಾರದ ಮೇಲೆ ಕೇಂದ್ರ ಕಳುಹಿಸಿತ್ತದೆ? ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯ ಸ್ಥಾನಕ್ಕೆ ಭಾರತ ಸರ್ಕಾರ ಯತ್ನ ನಡೆಸುತ್ತಿದೆ. ಇದು ಭಾರತದ ಶಕ್ತಿಯೇ? ಮಾನವ ಹಕ್ಕುಗಳ ಮಂಡಳಿಯಿಂದ ಅನುಮತಿ ಪಡೆದುಕೊಂಡಿರುವ ಮುಸ್ಲಿಮರನ್ನು ಕೇಂದ್ರ ಹಿಂದಕ್ಕೆ ಕಳುಹಿಸುತ್ತದೆಯೇ? ಎಂದು ಹೇಳಿದ್ದಾರೆ.
ಇದೇ ವೇಳೆ ತಮಿಳುನಾಡು ರಾಜ್ಯದಲ್ಲಿ ನೆಲೆಸಿರುವ ಶ್ರೀಲಂಕಾ ವಲಸಿಗರ ಕುರಿತತೆ ಮಾತನಾಡಿರುವ ಅವರು, ಭಯೋತ್ಪಾದನೆಗಳಲ್ಲಿ ಭಾಗಿಯಾಗುತ್ತಿದ್ದರೂ, ಶ್ರೀಲಂಕಾ ವಲಸಿಗರನ್ನು ಭಾರತದಲ್ಲಿರಲು ಅವಕಾಶ ಮಾಡಿಕೊಡಲಾಗಿದೆ. ಬಾಂಗ್ಲಾದೇಶದ ಚಕ್ಮಾ ಜನತೆ 1971ರಲ್ಲಿ ಭಾರತಕ್ಕೆ ಬಂದಿದ್ದರು. ಅರುಣಾಚಲ ಪ್ರದೇಶದಲ್ಲಿ ಇಂದಿಗೂ ಅವರನ್ನು ನಾವು ಕಾಣಬಹುದು.
ಕೇಂದ್ರದ ಆಡಳಿತಾರೂಢ ಎನ್ ಡಿಎ ಸರ್ಕಾರ ರೊಹಿಂಗ್ಯಾರನ್ನು ಮುಸ್ಲಿಮರೆಂದು ನೋಡಬಾರದು, ವಲಸಿಗರೆಂದು ಪರಿಗಣಿಸಬೇಕು. ರೊಹಿಂಗ್ಯಾ ವಲಸಿಗರಿಗೆ ಭಾರತ ಸರ್ಕಾರ ಆಶ್ರಯ ನೀಡಿ, ಸಾಮಾನ್ಯರಂತೆ ಅವರೂ ಕೂಡ ಗೌರವಯುತ ಜೀವನ ನಡೆಸಲು ಅವಕಾಶ ಮಾಡಿಕೊಡಲಿ ಎಂದು ಆಶಿಸುತ್ತೇವೆಂದು ತಿಳಿಸಿದ್ದಾರೆ.