ಶ್ರೀ ಕೃಷ್ಣ ಜನ್ಮಾಷ್ಟಮಿ ವೇಳೆ ಮಗುವನ್ನು ಎಲೆ ಆಕೃತಿಗೆ ಕಟ್ಟಿ ಮೆರವಣಿಗೆ: ತೀವ್ರ ಖಂಡನೆ

ಪೊಲೀಸರು ಮತ್ತು ಪೋಷಕರ ಸಮ್ಮುಖದಲ್ಲೇ 3 ವರ್ಷದ ಮಗುವೊಂದನ್ನು ಎಲೆಯಾಕಾರದ ಆಕೃತಿಗೆ ಕಟ್ಟಿ 2 ಗಂಟೆಗಳಿಗೆ ಹೆಚ್ಚು ಕಾಲ ಮೆರವಣಿಗೆ ಮಾಡಿದ ಅಮಾನವೀಯ...
ಶ್ರೀ ಕೃಷ್ಣ ಜನ್ಮಾಷ್ಟಮಿ ವೇಳೆ ಮಗುವನ್ನು ಎಲೆ ಆಕೃತಿಗೆ ಕಟ್ಟಿ ಮೆರವಣಿಗೆ
ಶ್ರೀ ಕೃಷ್ಣ ಜನ್ಮಾಷ್ಟಮಿ ವೇಳೆ ಮಗುವನ್ನು ಎಲೆ ಆಕೃತಿಗೆ ಕಟ್ಟಿ ಮೆರವಣಿಗೆ
Updated on
ತಿರುನಂತಪುರ: ಪೊಲೀಸರು ಮತ್ತು ಪೋಷಕರ ಸಮ್ಮುಖದಲ್ಲೇ 3 ವರ್ಷದ ಮಗುವೊಂದನ್ನು ಎಲೆಯಾಕಾರದ ಆಕೃತಿಗೆ ಕಟ್ಟಿ 2 ಗಂಟೆಗಳಿಗೆ ಹೆಚ್ಚು ಕಾಲ ಮೆರವಣಿಗೆ ಮಾಡಿದ ಅಮಾನವೀಯ ಘಟನೆಗೆ ಕೇರಳ ರಾಜ್ಯ ಸಾಕ್ಷಿಯಾಗಿದೆ. 
ಕಣ್ಣೂರಿನಲ್ಲಿ ಕಳೆದ ವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ವೇಲೆ 3 ವರ್ಷದ ಮಗುವಿಗೆ ಕೃಷ್ಣನಂತೆ ವೇಷ ಭೂಷಣ ಮಾಡಿ ಬಿಸಿಲಿನಲ್ಲೇ ಕಟ್ಟಿ ಹಾಕಲಾಗಿತ್ತು. ಸ್ತಬ್ಧ ಚಿತ್ರವೊಂದರ ಭಾಗವಾಗಿ ಮಗುವನ್ನು ಈ ರೀತಿ ಅಲಂಕರಿಸಲಾಗಿತ್ತು.
ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿದೆ. ಅಲ್ಲದೆ, ಈ ಘಟನೆ ಬಗ್ಗೆ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ಸಮಿತಿ ಸೂಚನೆ ನೀಡಿದೆ. 
ಎಲೆಯಾಕಾರದ ಬೋರ್ಡ್ ಗೆ ಕಟ್ಟಿ ಹಾಕಲಾಗಿದ್ದ ವೇಳೆ ಮಗು ತನ್ನ ಸಹಾಯಕ್ಕಾಗಿ ಗೋಗರೆದಿಲ್ಲವಾದರೂ, ನೋವು ಮತ್ತು ಪ್ರಾಯಸಪಟ್ಟಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com