ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಗ್ರೆನೇಡ್ ಸ್ಫೋಟಗೊಂಡು ಗಾಯಗೊಂಡಿದ್ದ ನಾಗರಿಕ ಮೃತಪಟ್ಟಿದ್ದು, ಈ ಮೂಲಕ ಅಸುನೀಗಿದವರ ಸಂಖ್ಯೆ ಮೂರಕ್ಕೇರಿದೆ.
ಕಳೆದ 21ರಂದು ನಡೆದ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದ ಸ್ಕಿಮ್ ಆಸ್ಪತ್ರೆಯ ಮುಷ್ತಾಕ್ ಅಹ್ಮದ್ ಶೇಖ್ ಇಂದು ಅಪರಾಹ್ನ ನಿಧನರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ 21ರಂದು ಟ್ರಾಲ್ ನಲ್ಲಿ ರಾಜ್ಯ ಕಾರ್ಮಿಕ ಸಚಿವ ಸಯೀಮ್ ಅಖ್ತರ್ ಮೇಲೆ ಗ್ರೆನೇಡ್ ದಾಳಿ ನಡೆದಿತ್ತು. ದಾಳಿಯಲ್ಲಿ ಯಾವುದೇ ಅಪಾಯಕ್ಕೀಡಾಗದೆ ಸಚಿವರು ಪಾರಾಗಿದ್ದರು. ಆದರೆ ಇಬ್ಬರು ಮೃತಪಟ್ಟು 34 ಮಂದಿ ಗಾಯಗೊಂಡಿದ್ದರು.