ಇನ್ನು ಇದೇ ಏಪ್ರಿಲ್ 5ರಂದು ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ಡಿಎಂಕೆ ಪಕ್ಷ ತಮಿಳುನಾಡು ಬಂದ್ ಗೆ ಕರೆ ನೀಡಿದ್ದು, ಇದಕ್ಕೂ ಮೊದಲು ತಮಿಳುನಾಡು ರೈತಪರ ಸಂಘಟನೆಗಳು ಹಾಗೂ ತಮಿಳುನಾಡು ವ್ಯಾಪಾರಸ್ಥರ ಒಕ್ಕೂಟ ಏಪ್ರಿಲ್ 3ರಂದು ತಮಿಳುನಾಡು ಬಂದ್ ಗೆ ಕರೆ ನೀಡಿವೆ. ಏಪ್ರಿಲ್ 3 ರ ಬಂದ್ ದಿನದಂದೇ ಆಡಳಿತ ರೂಢ ಎಐಡಿಎಂಕೆ ಪಕ್ಷದ ಸದಸ್ಯರು ಉಪವಾಸ ಸತ್ಯಾಗ್ರಹ ಕೂಡ ನಡೆಸಲಿದ್ದಾರೆ. ಅಂದು ಸಿಎಂ ಇ ಪಳನಿ ಸ್ವಾಮಿ, ಮತ್ತು ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಕೂಡ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.