ಇದಕ್ಕೂ ಮೊದಲು ಕಾಂಗ್ರೆಸ್, ಎಐಎಡಿಎಂಕೆ, ಬಿಎಸ್ಪಿ, ಸಿಪಿಐಎಂ, ಎಎಪಿ, ಟಿಡಿಪಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸದಸ್ಯರು ‘ನರೇಂದ್ರ ಮೋದಿ ದಲಿತ ವಿರೋಧಿ’ ಎಂಬ ಭಿತ್ತಿಫಲಕ ಹಿಡಿದುಕೊಂಡು, ದಲಿತ ವಿರೋಧಿ ಸರಕಾರವನ್ನು ಸಹಿಸಲಾಗದು ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಈ ಗದ್ದಲದ ಮಧ್ಯೆಯೇ ಭ್ರಷ್ಟಾಚಾರ ನಿಗ್ರಹ (ತಿದ್ದುಪಡಿ) ಮಸೂದೆ 2013ನ್ನು ಮಂಡಿಸಲು ಉಪಸಭಾಧ್ಯಕ್ಷ ಪಿ.ಜೆ.ಕುರಿಯನ್ ಸಚಿವ ಜಿತೇಂದ್ರ ಸಿಂಗ್ಗೆ ಸೂಚಿಸಿದರು.