ಅಮಾನವೀಯ ಕೃತ್ಯ: ಗಂಡು ಮಗು ಹೆರಲಿಲ್ಲವೆಂದು ಪತ್ನಿಯ ಕೈಗಳನ್ನು ಮುರಿದ ಪತಿ

ಗಂಡು ಮಗುವನ್ನು ಹೆರಲಿಲ್ಲ ಎಂಬ ಕಾರಣಕ್ಕೆ ಪತಿರಾಯ ಪತ್ನಿಯ ಕೈಗಳನ್ನು ಮುರಿದಿರುವ ದಾರುಣ ಘಟನೆ ಉತ್ತರಪ್ರದೇಶದ ಶಹಾಜನ್‌ಪುರದಲ್ಲಿ ನಡೆದಿದೆ...
ಹಲ್ಲೆ
ಹಲ್ಲೆ
ಶಹಾಜನ್‌ಪುರ: ಗಂಡು ಮಗುವನ್ನು ಹೆರಲಿಲ್ಲ ಎಂಬ ಕಾರಣಕ್ಕೆ ಪತಿರಾಯ ಪತ್ನಿಯ ಕೈಗಳನ್ನು ಮುರಿದಿರುವ ದಾರುಣ ಘಟನೆ ಉತ್ತರಪ್ರದೇಶದ ಶಹಾಜನ್‌ಪುರದಲ್ಲಿ ನಡೆದಿದೆ. 
ಕಳೆದ ಎಂಟು ವರ್ಷಗಳ ಹಿಂದೆ ಈ ದಂಪತಿ ಮದುವೆಯಾಗಿದ್ದು ಆಗಿನಿಂದ ಇಲ್ಲಿಯವರೆಗೂ ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಇದರಿಂದ ಬೇಸರಗೊಂಡ ಗಂಡ ಹಾಗೂ ಆತನ ಸೋದರರು ಆಕೆಯ ಕೈಗಳನ್ನು ಮುರಿದು ಹಾಕಿದ್ದಾರೆ. 
ಇತ್ತೀಚೆಗಷ್ಟೇ ಗಂಡ ತನ್ನ ಹೆಂಡತಿ 30 ವರ್ಷದ ರೇಖಾ ದೇವಿ ಅವರನ್ನು ಆಕೆಯ ತವರು ಮನೆಯಲ್ಲಿ ಬಿಟ್ಟು ಬಂದಿದ್ದರು. ತೀವ್ರ ನೋವಿನಿಂದ ಬಳಲುತ್ತಿದ್ದ ಮಗಳ ಸ್ಥಿತಿಯನ್ನು ಕಂಡು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಅಳಿಯನ ವಿರುದ್ಧ ಪೋಷಕರು ಪೊಲೀಸರು ದೂರು ನೀಡಿದ್ದಾರೆ. 
ಈ ದೂರಿನನ್ವಯ ಗಂಡ ಹಾಗೂ ಆತನ ಸೋದರರ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಅವರನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಸುಭಾಷ್ ಚಂದ್ರ ಶಕ್ಯಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com