ಪುಣೆ(ಮಹಾರಾಷ್ಟ್ರ): 1993ರ ಮುಂಬೈ ಸರಣಿ ಸ್ಪೋಟದ ರೂವಾರಿಗಳಲ್ಲಿ ಒಬ್ಬನಾದ ಎಂ. ತಾಹೀರ್ ಮರ್ಚೆಂಟ್ ಅಲಿಯಾಸ್ ತಾಹಿರ್ ತಕ್ಲಾ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಪುಣೆ ಯರವಾಡ ಜೈಲಿನಲ್ಲಿ ಬಂಧಿಯಾಗಿದ್ದ ಮರ್ಚೆಂಟ್ ಬುಧವಾರ ಬೆಳಿಗ್ಗಿನ ಜಾವ 3 ಗಂಟೆ ಸುಮಾರಿಗೆ ಹೃದಯಾಘಾತಕ್ಕೊಳಗಾಗಿದ್ದನು. ಅವರನ್ನು ತಕ್ಶ್ಃಅಣವೇ ಸಸೂನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫ್ಲಕಾರಿಯಾಗದ ಕಾರಣ 3.45ರ ಸುಮಾರಿಗೆ ಕೊನೆಯುಸಿರೆಳೆದನೆಂದು ಪೋಲೀಸರು ಹೇಳಿದ್ದಾರೆ.
1993ರ ಮುಂಬೈ ಸರಣಿ ಬಾಂಬ್ ಸ್ಪೋಟದ ಸಂಬಂಧ ಸೆಪ್ಟಂಬರ್ 7, 2017ರಂದು ತಾಹೀರ್ ಮರ್ಚೆಂಟ್ ಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.