ಬಸ್‌ಗಾಗಿ ಕಾಯುತ್ತಿದ್ದವರಿಗೆ ಯಮ ಸ್ವರೂಪಿಯಾಗಿ ಬಂದು ಕಾರು ಡಿಕ್ಕಿ, 7 ಮಂದಿ ದುರ್ಮರಣ!

ಬಸ್‌ಗಾಗಿ ಕಾಯುತ್ತಿದ್ದವರಿಗೆ ಯಮ ಸ್ವರೂಪಿಯಾಗಿ ಬಂದ ಎಸ್ಯುವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ಕೊಯಂಬತ್ತೂರಿನ ಸುಂದರಾಪುರಂನಲ್ಲಿ ಸಂಭವಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಕೊಯಂಬತ್ತೂರ್: ಬಸ್‌ಗಾಗಿ ಕಾಯುತ್ತಿದ್ದವರಿಗೆ ಯಮ ಸ್ವರೂಪಿಯಾಗಿ ಬಂದ ಎಸ್ಯುವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ಕೊಯಂಬತ್ತೂರಿನ ಸುಂದರಾಪುರಂನಲ್ಲಿ ಸಂಭವಿಸಿದೆ. 
ಜಗದೀಶ್ ಎಂಬಾತ ಎಸ್ಯುವಿ ಆಡಿ ಕಾರಿನಲ್ಲಿ ಪೊಲ್ಲಾಚಿಯಿಂದ ಕೊಯಂಬತ್ತೂರಿಗೆ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪೆರಿಯಾರ್ ಬಸ್ ನಿಲ್ದಾಣಕ್ಕೆ ನುಗ್ಗಿದೆ. ಈ ವೇಳೆ ಬಸ್ ಗಾಗಿ ಕಾಯುತ್ತಿದ್ದವರ ಮೇಲೆ ಕಾರು ಹರಿದಿದ್ದು ಸ್ಥಳದಲ್ಲೇ ಏಳು ಮಂದಿ ಸಾವನ್ನಪ್ಪಿದ್ದಾರೆ. 
ವೇಗವಾಗಿ ಬಂದ ಕಾರು ಬಸ್ ನಿಲ್ದಾಣದ ಬಳಿ ನಿಂತಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ನಜ್ಜು ಗುಜ್ಜಾಗಿದೆ. ನಂತರ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಹೂವಿನ ಅಂಗಡಿಗೆ ನುಗ್ಗಿದೆ. 
ಅಪಘಾತದಲ್ಲಿ ಮೃತಪಟ್ಟವರನ್ನು ಸೋಮು(55), ಸುರೇಶ್(43), ಹಂಸವೇಣಿ(30), ಸುಭಾಷಿಣಿ(20), ಶ್ರೀರಂಗದಾಸ್(75) ಮತ್ತು ಕುಪ್ಪಮಲ್(60) ಎಂದು ಗುರುತಿಸಲಾಗಿದೆ. ಇನ್ನು ಆಟೋದಲ್ಲಿ ಕುಳಿತ್ತಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com