ಅಂಬೇಡ್ಕರ್ ಪ್ರತಿಮೆಗೆ ಬಿಜೆಪಿ ಮುಖಂಡರಿಂದ ಮಾಲಾರ್ಪಣೆ: ದಲಿತ ವಕೀಲರಿಂದ ಗಂಗಾಜಲದಲ್ಲಿ ಶುದ್ದೀಕರಣ!

ಬಿಜೆಪಿ ರಾಜ್ಯ ಕಾರ್ಯದರ್ಶಿ ಸುನೀಲ್ ಬನ್ಸಾಲ್ ಶುಕ್ರವಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು, ಆದರೆ ಇದೇ ವೇಳೆ ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೀರತ್: ಬಿಜೆಪಿ ರಾಜ್ಯ ಕಾರ್ಯದರ್ಶಿ ಸುನೀಲ್ ಬನ್ಸಾಲ್ ಶುಕ್ರವಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು, ಆದರೆ ಇದೇ ವೇಳೆ ಪ್ರತಿಮೆಯನ್ನು ಕೆಲ ದಲಿತ ವಕೀಲರು ಹಾಲು ಮತ್ತು ಗಂಗಾಜಲದಿಂದ ಶುದ್ದೀಕರಿಸಿರುವ ಘಟನೆ ಮೀರತ್ ನಲ್ಲಿ ನಡೆದಿದೆ.
ಜಿಲ್ಲಾ ನ್ಯಾಯಾಲಯದ ಮುಂದೆ ಇರುವ ಅಂಬೇಡ್ಕರ್ ಪ್ರತಿಮೆಗೆ ಸುನೀಲ್ ಬನ್ಸಾಲಿ ಮಾಲಾರ್ಪಣೆ ಮಾಡಿದ್ದರು, ಇದರಿಂದ ಪ್ರತಿಮೆ ಕೊಳಕಾಗಿತ್ತು , ಅದಕ್ಕಾಗಿ ಹಾಲು ಮತ್ತು ಗಂಗಾಜಲದಿಂದ ಶುದ್ದಿಕರೀಸಿವೆ ಎಂದು ಹೇಳಿದ್ದಾರೆ..
ಬಿಜೆಪಿ ಸರ್ಕಾರ ದಲಿತರನ್ನು ತುಳಿಯುತ್ತಿದೆ,  ಅಂಬೇಡ್ಕರ್ ಗಾಗಿ ಅವರು ಏನೂ ಮಾಡಲಿಲ್ಲ,ತಮ್ಮ ಪಕ್ಷದ ಪರವಾಗಿ ಪ್ರಚಾರ ಪಡೆದುಕೊಳ್ಳಲು ಮಾತ್ರ ಅಂಬೇಡ್ಕರ್ ಹೆಸರನ್ನು ಬಳಸಿಕೊಳ್ಳುತ್ತಿದೆ, ಎಂದು ವಕೀಲರೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com