ಕೇರಳಕ್ಕೆ ನೀಡುವ ವಿದೇಶಿ ನೆರವನ್ನು ಭಾರತ ಒಪ್ಪಿಕೊಳ್ಳುತ್ತಿಲ್ಲ: ಥಾಯ್‏ಲ್ಯಾಂಡ್

ಪ್ರವಾಹ ಪೀಡಿತ ಕೇರಳಕ್ಕೆ ನೀಡಿದ್ದ ವಿದೇಶಿ ಆರ್ಥಿಕ ನೆರವನ್ನು ಭಾರತ ತಿರಸ್ಕರಿಸಿದೆ ಎಂದು ಭಾರತದಲ್ಲಿರುವ...
ಪ್ರವಾಹ ಸಂತ್ರಸ್ತರನ್ನು ಸ್ಥಳಾಂತರಿಸುತ್ತಿರುವುದು
ಪ್ರವಾಹ ಸಂತ್ರಸ್ತರನ್ನು ಸ್ಥಳಾಂತರಿಸುತ್ತಿರುವುದು
Updated on
ನವದೆಹಲಿ: ಪ್ರವಾಹ ಪೀಡಿತ ಕೇರಳಕ್ಕೆ ನೀಡಿದ್ದ ವಿದೇಶಿ ಆರ್ಥಿಕ ನೆರವನ್ನು ಭಾರತ ತಿರಸ್ಕರಿಸಿದೆ ಎಂದು ಭಾರತದಲ್ಲಿರುವ ಥಾಯ್‏ಲ್ಯಾಂಡ್ ರಾಯಭಾರಿ ಚುಟಿನ್‏ಟಾರ್ನ್ ಸ್ಯಾಮ್ ಗೊನ್ಸಕ್ಡಿ ಅವರು ಹೇಳಿದ್ದಾರೆ.
ಕೇರಳ ಪ್ರವಾಹ ಪರಿಹಾರಕ್ಕಾಗಿ ಭಾರತ ಸರ್ಕಾರ ವಿದೇಶಿ ಆರ್ಥಿಕ ನೆರವನ್ನು ಸ್ವೀಕರಿಸದಿರುವುದಕ್ಕೆ ಅನೌಪಚಾರಿಕವಾಗಿ ವಿಷಾದಿಸುತ್ತೇನೆ ಮತ್ತು ನಮ್ಮ ಹೃದಯ ಭಾರತೀಯರೊಂದಿಗೆ ಇವೆ ಎಂದು ಚುಟಿನ್‏ಟಾರ್ನ್ ಅವರು ಟ್ವೀಟ್ ಮಾಡಿದ್ದಾರೆ.
ಕೇರಳ ಪ್ರವಾಹ ಪೀಡಿತರಿಗೆ ದೇಶ-ವಿದೇಶಗಳಿಂದ ಜನ ನೆರವಿನ ಹಸ್ತ ಚಾಚುತ್ತಿದ್ದಾರೆ. ಆದ್ರೆ ವಿದೇಶಿ ನೆರವನ್ನು ಭಾರತ ನಿರಾಕರಿಸುವ ಸಾಧ್ಯತೆ ಇದೆ. ಕೇರಳ ಪ್ರವಾಹದ ನಂತರ ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕ್ಕಾಗಿ ಯುಎಇ, ಥಾಯ್‏ಲ್ಯಾಂಡ್, ಕತಾರ್ ಹಾಗೂ ಮಾಲ್ಡೀವ್ಸ್ ರಾಜ್ಯಗಳು ಸಹಾಯ ಮಾಡಲು ಮುಂದೆ ಬಂದಿವೆ.
ಉನ್ನತ ಮೂಲಗಳ ಪ್ರಕಾರ, ಭಾರತ ವಿದೇಶದ ಸಹಾಯ ನಿರಾಕರಿಸಲಿದೆಯಂತೆ. ನೆರವಿಗೆ ಮುಂದೆ ಬಂದ ದೇಶಗಳಿಗೆ ಕೃತಜ್ಞತೆ ಸಲ್ಲಿಸಿರುವ ಭಾರತ ತನ್ನ ಸಂಪನ್ಮೂಲ ಬಳಸಿಕೊಂಡು ಕೇರಳ ಪುನರ್ ನಿರ್ಮಾಣ ಕಾರ್ಯ ಮಾಡಲಿದೆಯಂತೆ. ಭಾರತದಲ್ಲಿರುವ ಸಂಪನ್ಮೂಲ ಕೇರಳ ಪುನರ್ ನಿರ್ಮಾಣಕ್ಕೆ ಸಾಕು ಎಂಬುದು ಭಾರತದ ಅಭಿಪ್ರಾಯವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com