ಮುಂಬೈ ಪರೇಲ್‌ "ಕ್ರಿಸ್ಟಲ್ ಟವರ್" ನಲ್ಲಿ ಬೆಂಕಿ ಅನಾಹುತ: 4 ಸಾವು, 16 ಮಂದಿ ರಕ್ಷಣೆ

ಮುಂಬೈ ನಗರದ ದಾದರ್ ಪ್ರದೇಶದಲ್ಲಿ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು 16 ಮಂದಿಯನ್ನು ಆಸ್ಪತ್ರೆಗೆ....
ಮುಂಬೈ ಕ್ರಿಸ್ಟಲ್ ಟವರ್ ಬೆಂಕಿ ಅವಘಡ
ಮುಂಬೈ ಕ್ರಿಸ್ಟಲ್ ಟವರ್ ಬೆಂಕಿ ಅವಘಡ
ಮುಂಬೈ: ಮುಂಬೈ ನಗರದ ದಾದರ್ ಪ್ರದೇಶದಲ್ಲಿ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು 16 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಕಿ ಅನಾಹುತ ಸಂಭವಿಸಿದ "ಕ್ರಿಸ್ಟಲ್ ಟವರ್" ನಿಂದ ಇದುವರೆಗೆ 16 ಜನರನ್ನು ರಕ್ಷಿಸಲಾಗಿದೆ.ಹಾಗೆಯೇ ಅವರುಗಳನ್ನು ಕೆಇಎಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕಟ್ಟಡದಲ್ಲಿ ಇನ್ನೂ ಸಿಲುಕಿಕೊಂಡಿರುವ ಜನರಿಗಾಗಿ ಶೊಧ ಕಾರ್ಯಾಚರಣೆ ನಡೆಯುತ್ತಿದೆ.
ಕಟ್ಟಡದ 12 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ದಳಕ್ಕೆ ಬುಧವಾರ ಬೆಳಿಗ್ಗೆ 8.32 ಗಂಟೆಗೆ ಸಂದೇಶ ತಲುಪಿತ್ತು. ಆದರೆ ಬೆಂಕಿ  13 , 14 ಮತ್ತು 15 ನೇ ಮಹಡಿಯನ್ನೂ ಆವರಿಸಿದೆ ಎಂದು ವರದಿಯಾಗಿದೆ.
ಬೆಂಕಿಯಿಂದಾಗಿ ದಟ್ಟ ಹೊಗೆ ಆವರಿಸಿದ್ದು ಬಹುಮಹಡಿ ಕಟ್ಟಡದ ನಿವಾಸಿಗಳು ಮೆಟ್ಟಿಗುಗಳ ನಡುವೆ ಸಿಲುಕಿದ್ದರು ಎಂದು ಮುಂಬೈ ಅಗ್ನಿಶಾಮಕ ದಳದ ಮುಖ್ಯಸ್ಥ ಪಿ ಎಸ್ ರಹಾಂಗ್ಡೇಲ್ ಹೇಳಿದ್ದಾರೆ.
ಎಂಟು ಅಗ್ನಿಶಾಮಕ ವಾಹನಗಳು,  ನಾಲ್ಕು ವಾಟರ್ ಟ್ಯಾಂಕರ್ಗಳು, ಮುಂಬಯಿ ಪೊಲೀಸ್ ಅಧಿಕಾರಿಗಳು ಮತ್ತು ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com