ಸಹೋದರನೊಂದಿಗೆ ಆತ್ಮೀಯ ಬಂಧನವನ್ನು ಹೊಂದಿದ್ದೆ. ತೊಂಗಪಾಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನನ್ನ ಅಣ್ಣ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ 2014ರಲ್ಲಿ ಹುತಾತ್ಮನಾಗಿದ್ದ. ರಕ್ಷಾಬಂಧನ ದಿನದಂದು ಸಹೋದರನಿಲ್ಲ. ಬಹಳ ದುಃಖವಾಗುತ್ತಿದೆ. ಆತನಿಗಾಗಿರುವ ರಾಖಿಯನ್ನು ಮತ್ತೊಬ್ಬರಿಗೆ ಕಟ್ಟಲು ನನಗೆ ಇಷ್ಟವಿಲ್ಲ. ಆದರೆ, ನನ್ನ ಅಣ್ಣನ ಬಗ್ಗೆ ನನಗೆ ಹೆಮ್ಮೆ. ನನಗಿದ್ದದ್ದು ಒಬ್ಬನೇ ಅಣ್ಣ. ಆತನನ್ನು ಕಳೆದುಕೊಂಡಿದ್ದೇನೆ. ಇದೀಗ ಆತನ ಪ್ರತಿಮೆಗೆ ರಾಖಿ ಕಟ್ಟಿ ರಕ್ಷಾಬಂಧನ ಆಚರಿಸಿದ್ದೇನೆಂದು ಯುವತಿ ಹೇಳಿದ್ದಾಳೆ.