ಇನ್ನು ನಿನ್ನೆ ಪ್ರಕಟಗೊಂಡ ಪಂಚ ರಾಜ್ಯ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದ್ದು, ತನ್ನ ನಿಯಂತ್ರಣದಲ್ಲಿದ್ದ ಮಧ್ಯ ಪ್ರದೇಶ, ಛತ್ತೀಸ್ ಘಡ, ರಾಜಸ್ಥಾನದಲ್ಲಿ ಅಧಿಕಾರಿ ಕಳೆದುಕೊಂಡಿದೆ. ಅಂತೆಯೇ ತೆಲಂಗಾಣದಲ್ಲಿ ಟಿಆರ್ ಎಸ್ ಅಧಿಕಾರ ರಚನೆ ಮಾಡಲಿದ್ದು, ಮಿಜೋರಾಂ ನಲ್ಲಿ ಎಂಎನ್ಎಫ್ ಅಧಿಕಾರದ ಗದ್ದುಗೇರಿದೆ. ಆ ಮೂಲಕ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಹೇಳಲಾಗುತ್ತಿದ್ದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿದೆ.