ರಾಜೀವ್ ಗಾಂಧಿ ಭಾರತ ರತ್ನ ವಾಪಸ್ ಗೆ ನಿರ್ಣಯ: ರಾಜೀನಾಮೆ ನೀಡುತ್ತೇನೆ- ಆಪ್ ಶಾಸಕಿ ಅಲ್ಕಾ ಲಾಂಬ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನೀಡಲಾಗಿದ್ದ ಭಾರತ ರತ್ನ ಪ್ರಶಸ್ತಿಯನ್ನು ಹಿಂಪಡೆಯಬೇಕೆಂಬ ನಿರ್ಣಯಕ್ಕೆ ಬೆಂಬಲಿಸದ ಆಮ್ ಆದ್ಮಿ ಪಕ್ಷದ ಶಾಸಕಿ ಅಲ್ಕಾ ಲಾಂಬ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ರಾಜೀವ್ ಗಾಂಧಿ ಭಾರತ ರತ್ನ ವಾಪಸ್ ಗೆ ನಿರ್ಣಯ: ರಾಜೀನಾಮೆ ನೀಡುತ್ತೇನೆ- ಆಪ್ ಶಾಸಕಿ ಅಲ್ಕಾ ಲಾಂಬ
ರಾಜೀವ್ ಗಾಂಧಿ ಭಾರತ ರತ್ನ ವಾಪಸ್ ಗೆ ನಿರ್ಣಯ: ರಾಜೀನಾಮೆ ನೀಡುತ್ತೇನೆ- ಆಪ್ ಶಾಸಕಿ ಅಲ್ಕಾ ಲಾಂಬ
Updated on
ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನೀಡಲಾಗಿದ್ದ ಭಾರತ ರತ್ನ ಪ್ರಶಸ್ತಿಯನ್ನು ಹಿಂಪಡೆಯಬೇಕೆಂಬ ನಿರ್ಣಯಕ್ಕೆ ಬೆಂಬಲಿಸದ ಆಮ್ ಆದ್ಮಿ ಪಕ್ಷದ ಶಾಸಕಿ ಅಲ್ಕಾ ಲಾಂಬ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. 
1984 ರ ಸಿಖ್ ವಿರೋಧಿ ವಿರೋಧಿ ದಂಗೆಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಂಡಿದ್ದ ದೆಹಲಿ ವಿಧಾನಸಭೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನೀಡಲಾಗಿರುವ ಭಾರತ ರತ್ನ ಪ್ರಶಸ್ತಿಯನ್ನು ಹಿಂಪಡೆಯಬೇಕೆಂಬ ಆಗ್ರಹ ಕೇಳಿಬಂದಿತ್ತು. ಆದರೆ ಆಪ್ ಶಾಸಕಿ ಅಲ್ಕಾ ಲಾಂಬ ಈ ನಿರ್ಣಯವನ್ನು ಬೆಂಬಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಸಿಎಂ ಅರವಿಂದ್ ಕೇಜ್ರಿವಾಲ್, ಅಲ್ಕಾ ಲಾಂಬ ರಾಜೀನಾಮೆಗೆ ಆಗ್ರಹಿಸಿದ್ದರು. 
ನಿರ್ಣಯವನ್ನು ಬೆಂಬಲಿಸುವಂತೆ ನನ್ನ ಮೇಲೆ ಒತ್ತಡ ಹೇರಲಾಗಿತ್ತು. ಆದರೆ ನಿರ್ಯಣಯವನ್ನು ನಾನು ಬೆಂಬಲಿಸಲಿಲ್ಲ ಎಂದು ಅಲ್ಕಾ ಲಾಂಬ ಹೇಳಿದ್ದಾರೆ. ನನ್ನ ನಿರ್ಧಾರಿಂದ ಉಂಟಾಗುವ ಪರಿಣಾಮಗಳನ್ನು ನಾನು ಎದುರಿಸುತ್ತೇನೆ, ಈ ಬಗ್ಗೆ ಸಿಎಂ ಕೇಜ್ರಿವಾಲ್ ಅವರೊಂದಿಗೆ ಮಾತನಾಡಿದ್ದೇನೆ. ರಾಜೀನಾಮೆ ನೀಡಲು ಆಗ್ರಹಿಸಿದ್ದಾರೆ ಎಂದು ಅಲ್ಕಾ ಲಾಂಬ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com