ಕಾಕಿನಾಡ ಬಂದರಿನಲ್ಲಿ ಎರಡು ಕ್ರೇನ್ ಗಳ ಕುಸಿತ, ಓರ್ವ ಸಾವು, 10 ಮಂದಿಗೆ ಗಾಯ

ನೆರೆಯ ಆಂಧ್ರಪ್ರದೇಶದ ಕಾಕಿನಾಡ ಬಂದರಿನಲ್ಲಿ ದುರಸ್ಥಿ ಮಾಡಲಾಗುತ್ತಿದ್ದ ಎರಡು ಬೃಹತ್ ಗಾತ್ರದ ಕ್ರೇನ್ ಗಳು ಕುಸಿದ ಪರಿಣಾಮ ಓರ್ವ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಇನ್ನೂ ಹಲವು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ.
ಕುಸಿತಗೊಂಡಿರುವ ಕ್ರೇನ್ ಗಳು
ಕುಸಿತಗೊಂಡಿರುವ ಕ್ರೇನ್ ಗಳು
Updated on

ಕಾಕಿನಾಡ: ನೆರೆಯ ಆಂಧ್ರಪ್ರದೇಶದ  ಕಾಕಿನಾಡ ಬಂದರಿನಲ್ಲಿ  ದುರಸ್ಥಿ ಮಾಡಲಾಗುತ್ತಿದ್ದ ಎರಡು ಬೃಹತ್ ಗಾತ್ರದ ಕ್ರೇನ್ ಗಳು  ಕುಸಿದ ಪರಿಣಾಮ ಓರ್ವ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಇನ್ನೂ ಹಲವು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ.

 ಬೆಳಗ್ಗೆ 10-30ರಲ್ಲಿ ಈ ದುರ್ಘಟನೆ ನಡೆದಿದೆ. ಬಂದರಿನಲ್ಲಿ ಹಡಗುಗಳಿಂದ ಸರಕು ಮತ್ತು ಸಾಮಾಗ್ರಿಗಳನ್ನು ಇಳಿಸುವ , ತುಂಬುವ ಕೆಲಸದಲ್ಲಿ ಕೆಲಸಗಾರರು ನಿರತರಾಗಿದ್ದಾಗ ಇದಕ್ಕಾಗಿ ಬಳಸುತ್ತಿದ್ದ ಬೃಹತ್ ಗಾತ್ರದ ಕ್ರೇನ್ ಗಳು ಹಠಾತ್ತನೇ ಕುಸಿದಿವೆ.

ಕೂಡಲೇ ಸ್ಥಳಕ್ಕೆ ಧಾವಿಸಿದ  ಅಗ್ನಿ ಮತ್ತು ಸುರಕ್ಷತಾ ವಿಭಾಗದ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮೃತನನ್ನು ಪಶ್ಚಿಮ ಗೋದಾವರಿ ಜಿಲ್ಲೆಯ ಕೊವೂರು ಗ್ರಾಮದ ವಿಟೈಪಲ್ಲಿ  ಲಕ್ಷ್ಮಣ್ ಕುಮಾರ್ (35 ) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಮತ್ತೊಬ್ಬ ವ್ಯಕ್ತಿಯ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com