ಶ್ರೀನಗರ: ಮಾಜಿ ಎಂಎಲ್ ಸಿ ಮನೆಯಿಂದ ಎಕೆ-47 ರೈಪಲ್ಸ್ ಕದಿದ್ದ ನಾಲ್ವರು ಪೊಲೀಸರ ಅಮಾನತು

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿನ ಜವಹರ್ ನಗರದಲ್ಲಿನ ಮಾಜಿ ಕಾಂಗ್ರೆಸ್ ಎಂಎಲ್ ಸಿ ಮುಜಾಪರ್ ಪರೈ ಅವರ ಮನೆಯಿಂದ ನಾಲ್ಕು ಎಕೆ-47 ಬಂದೂಕು ಕದಿದ್ದ ನಾಲ್ವರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿನ ಜವಹರ್ ನಗರದಲ್ಲಿನ ಮಾಜಿ ಕಾಂಗ್ರೆಸ್ ಎಂಎಲ್ ಸಿ  ಮುಜಾಪರ್ ಪರೈ ಅವರ ಮನೆಯಿಂದ  ನಾಲ್ಕು  ಎಕೆ-47 ಬಂದೂಕು ಕದಿದ್ದ ನಾಲ್ವರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಮಾಜಿ ಎಂಎಲ್ ಸಿ ಮನೆಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ನಿಯೋಜಿಸಲಾಗಿದ್ದ ಪೊಲೀಸರೇ ಈ  ಕೃತ್ಯವೆಸಗಿದ್ದರಿಂದ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಎಕೆ-47 ರೈಪಲ್ಸ್ ನ್ನು ಉಗ್ರರು ಕಳವು ಮಾಡಿರಬಹುದೆಂದು ಶಂಕಿಸಲಾಗಿತ್ತು. ಮಾಜಿ ಎಂಎಲ್ ಸಿ ಮನೆಯಿಂದ ರೈಪಲ್ಸ್ ಕಳುವಾಗಿರುವ  ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರು ವರದಿ ಪ್ರಕಟಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com