ಶ್ರೀನಗರ: ಮಾಜಿ ಎಂಎಲ್ ಸಿ ಮನೆಯಿಂದ ಎಕೆ-47 ರೈಪಲ್ಸ್ ಕದಿದ್ದ ನಾಲ್ವರು ಪೊಲೀಸರ ಅಮಾನತು

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿನ ಜವಹರ್ ನಗರದಲ್ಲಿನ ಮಾಜಿ ಕಾಂಗ್ರೆಸ್ ಎಂಎಲ್ ಸಿ ಮುಜಾಪರ್ ಪರೈ ಅವರ ಮನೆಯಿಂದ ನಾಲ್ಕು ಎಕೆ-47 ಬಂದೂಕು ಕದಿದ್ದ ನಾಲ್ವರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿನ ಜವಹರ್ ನಗರದಲ್ಲಿನ ಮಾಜಿ ಕಾಂಗ್ರೆಸ್ ಎಂಎಲ್ ಸಿ  ಮುಜಾಪರ್ ಪರೈ ಅವರ ಮನೆಯಿಂದ  ನಾಲ್ಕು  ಎಕೆ-47 ಬಂದೂಕು ಕದಿದ್ದ ನಾಲ್ವರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಮಾಜಿ ಎಂಎಲ್ ಸಿ ಮನೆಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ನಿಯೋಜಿಸಲಾಗಿದ್ದ ಪೊಲೀಸರೇ ಈ  ಕೃತ್ಯವೆಸಗಿದ್ದರಿಂದ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಎಕೆ-47 ರೈಪಲ್ಸ್ ನ್ನು ಉಗ್ರರು ಕಳವು ಮಾಡಿರಬಹುದೆಂದು ಶಂಕಿಸಲಾಗಿತ್ತು. ಮಾಜಿ ಎಂಎಲ್ ಸಿ ಮನೆಯಿಂದ ರೈಪಲ್ಸ್ ಕಳುವಾಗಿರುವ  ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರು ವರದಿ ಪ್ರಕಟಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com