ರಜನಿಕಾಂತ್ ಅವರು ಸೂಕ್ತ ರೀತಿಯಲ್ಲಿ ಆರೋಪಗಳನ್ನು ಮಾಡಬೇಕು. ನಮ್ಮಿಂದ ಯಾವುದೇ ತಪ್ಪಾಗಿದ್ದರೂ ಅದನ್ನು ಸರಿಪಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ತಮಿಳುನಾಡಿನಲ್ಲಿ ಯಾವ ವ್ಯವಸ್ಥೆ ಸರಿಯಿಲ್ಲ ಎಂಬುದನ್ನು ನಟ ಸ್ಪಷ್ಟಪಡಿಸಲಿ. ಅಮ್ಮ ಸರ್ಕಾರದಂತೆ ನೋಡಿದರೆ, ಎಲ್ಲವೂ ಸರಿಯಾಗಿದೆ. ರಾಜ್ಯದಲ್ಲಿ ವ್ಯವಸ್ಥೆ ಸರಿಯಿದ್ದರಿಂದ, ಜನಪರ ಕಲ್ಯಾಣ ಯೋಜನೆಗಳು ಸರಿಯಿದ್ದರಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಜಯಲಲಿತಾ ಅವರು ಭರ್ಜರಿ ಜಯ ಸಾಧಿಸಿದ್ದರು. ಉತ್ತರ ಭಾರತದಲ್ಲಿ ಭಯೋತ್ಪಾದಕರಿದ್ದು, ರಜನಿಕಾಂತ್ ಅವರು ಅಲ್ಲಿಗ ಹೋಗಿ, ವ್ಯವಸ್ಥೆಯನ್ನು ಸರಿಪಡಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ.