ಗುರುವಾರ ಬೆಳಗ್ಗೆ ಕಾಶ್ಮೀರದ ಪೂಂಛ್ ನ ಮೆಂಧಾರ್ ಸೆಕ್ಟರ್ ನಲ್ಲಿ ಭಾರತೀಯ ಸೇನೆಯ ಕಣ್ತಪ್ಪಿಸಿ ಗಡಿಯೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಉಗ್ರರನ್ನು ಭಾರತೀಯ ಸೇನೆಯ ಸೈನಿಕರು ಹಿಮ್ಮೆಟ್ಟಿಸಿದ್ದಾರೆ. ಶಂಕಿತ ವ್ಯಕ್ತಿಗಳು ಗಡಿಯೊಳಗೆ ನುಸುಳುತ್ತಿದ್ದಂತೆಯೇ ಅವರತ್ತ ಸೇನೆ ಗುಂಡು ಹಾರಿಸಿದ್ದು, ಈ ವೇಳೆ ಉಗ್ರರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಪರಾರಿಯಾಗಿರುವ ಉಗ್ರರಿಗಾಗಿ ಸಿಆರ್ ಪಿಎಫ್ ಯೋಧರು ತೀವ್ರ ಶೋಧ ನಡೆಸುತ್ತಿದ್ದು, ಅಂತೆಯೇ ಇದಕ್ಕೂ ಮೊದಲು ಉಗ್ರರು ಭಾರತದೊಳಗೆ ನುಸುಳಿರುವ ಶಂಕೆ ಮೇರೆಗೆ ಶೋಧ ತೀವ್ರ ಗೊಳಿಸಲಾಗಿದೆ.