ನಿನ್ನೆ ಪ್ರಕಟವಾದ ಕಾವೇರಿ ನೀರು ಹಂಚಿಕೆ ವಿವಾದದ ಅಂತಿಮ ತೀರ್ಪಿನಲ್ಲಿ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 14.75 ಟಿಎಂಸಿ ನೀರು ಹಂಚಿಕೆ ಮಾಡಲಾಗಿದ್ದು, ತಮಿುನಾಡಿನ ನೀರಿನ ಪ್ರಮಾಣವನ್ನು 177.5 ಟಿಎಂಸಿಗೆ ಇಳಿಕೆ ಮಾಡಲಾಗಿತ್ತು. ತೀರ್ಪಿನ ಕುರಿತಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಸಿಎಂ ಇ ಪಳನಿ ಸ್ವಾಮಿ, ನೀರು ಹಂಚಿಕೆ ಪ್ರಮಾಣ ಕಡಿತವಾಗಿರುವುದು ನಿರಾಶೆ ತಂದಿರುವುದು ನಿಜ. ಆದರೆ ತಮಿಳುನಾಡು ಪಾಲಿಗೆ ಆಶಾದಾಯಕವಾದ ಒಂದಷ್ಟು ಅಂಶಗಳು ತೀರ್ಪಿನಲ್ಲಿವೆ ಎಂದು ಹೇಳಿದ್ದಾರೆ.