ಪಿಎನ್ ಬಿ ಹಗರಣ: ಮಾರ್ಚ್ 5ರವರೆಗೆ ವಿಪುಲ್ ಅಂಬಾನಿ ಪೊಲೀಸ್ ವಶಕ್ಕೆ

ಪಂಜಾಬ್ ನ್ಯಾಷನಲ್ ಬ್ಯಾಂಕಿನ 11.400 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ ಪೈರ್ ಸ್ಟಾರ್ ಡೈಮಂಡ್ ಅಧ್ಯಕ್ಷ ವಿಪುಲ್ ಅಂಬಾನಿ ಸೇರಿದಂತೆ ಮತ್ತಿತರ ನಾಲ್ಕು ಮಂದಿಯನ್ನು ಮಾರ್ಚ್ 5ರವರೆಗೂ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿನ 11.400 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ ಪೈರ್ ಸ್ಟಾರ್ ಡೈಮಂಡ್ ಅಧ್ಯಕ್ಷ ವಿಪುಲ್ ಅಂಬಾನಿ ಸೇರಿದಂತೆ ಮತ್ತಿತರ ನಾಲ್ಕು ಮಂದಿಯನ್ನು ಮಾರ್ಚ್ 5ರವರೆಗೂ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ

ಈ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ಸಿಬಿಐ ತನಿಖಾ ನ್ಯಾಯಾಲಯ ನಾಲ್ವರು ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ.

ಹಗರಣ ಬೆಳಕಿಗೆ ಬಂದ ನಂತರ ನೀರವ್ ಮೋದಿಗೆ ಸೇರಿದ ಎಲ್ಲಾ ಕಡೆ ಶೋಧ ಕಾರ್ಯಚಾರಣೆ ನಡೆಸಿದ ತನಿಖಾ ಸಿಬ್ಬಂದಿಗಳು, ಆತನಿಗೆ ಸೇರಿದ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಜನವರಿ 1ರಿಂದಲೇ  ದೇಶದಿಂದ ನಾಪತ್ತೆಯಾಗಿರುವ ನೀರವ್ ಮೋದಿ, ತನ್ನ ವಕೀಲರ ಮೂಲಕ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com