ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಫೈರ್ ಸ್ಟಾರ್ ಡೈಮಂಡ್ ನ ಅಧ್ಯಕ್ಷ ವಿಫುಲ್ ಅಂಬಾನಿ ಬಂಧನ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈರ್ ಸ್ಟಾರ್ ಡೈಮಂಡ್ಸ್ ಅಧ್ಯಕ್ಷ ವಿಫುಲ್ ಅಂಬಾನಿಯನ್ನು ಸಿಬಿಐ ಬಂಧಿಸಿದ್ದು ಈ ಪ್ರಕರಣದ ಮೊದಲ ಹೈಪ್ರೊಫೈಲ್ ಬಂಧನ ಇದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈರ್ ಸ್ಟಾರ್ ಡೈಮಂಡ್ಸ್ ಅಧ್ಯಕ್ಷ ವಿಫುಲ್ ಅಂಬಾನಿಯನ್ನು ಸಿಬಿಐ ಬಂಧಿಸಿದ್ದು ಈ ಪ್ರಕರಣದ ಮೊದಲ ಹೈಪ್ರೊಫೈಲ್ ಬಂಧನ ಇದಾಗಿದೆ. 
ವಿಫುಲ್ ಅಂಬಾನಿ ಅಂಬಾನಿ ಸಹೋದರರ ಸಂಬಂಧಿಯಾಗಿದ್ದು, ಈ ಪ್ರಕರಣದಲ್ಲಿ ವಿಫುಲ್ ಅಂಬಾನಿಯನ್ನು ಬಂಧಿಸಿರುವುದಕ್ಕೂ ಅಂಬಾನಿ ಸಹೋದರರು ಅಥವಾ ಅವರ ಸಂಸ್ಥೆಗಳು ಶಾಮೀಲಾಗಿರುವುದರ ಬಗ್ಗೆ ಸಿಬಿಐ ಈ ವರೆಗೂ ಮಾಹಿತಿ ನೀಡಿಲ್ಲ. 
ವಿಫುಲ್ ಅಂಬಾನಿಯೊಂದಿಗೆ ಇನ್ನೂ 4 ಹಿರಿಯ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಫೈರ್ ಸ್ಟಾರ್ ಡೈಮಂಡ್ ನ ಹಿರಿಯ ಕಾರ್ಯನಿರ್ವಹಕರಾಗಿರುವ ಕವಿತಾ ಮಾಣಿಕ್ಕರ್, ಅರ್ಜುನ್ ಪಾಟೀಲ್ ನ್ನೂ ಬಂಧಿಸಲಾಗಿದೆ.   
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆ ನಡೆದಿರುವ ಪ್ರಕರಣದಲ್ಲಿ ಎಲ್ಒಯು ಗಳನ್ನು ನೀಡಿರುವ ಅಪರಾಧಕ್ಕೆ ಸಂಬಂಧಿಸಿದಂತೆ ಸೋಲಾರ್ ಎಕ್ಸ್ಪೋರ್ಟ್ಸ್, ಡೈಮಂಡ್ ಆರ್ ಯುಎಸ್, ಸ್ಟೆಲ್ಲರ್ ಡೈಮಂಡ್ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ಮಾಣಿಕ್ಕರ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com