ಆದರೆ ತೇಜ್ ಪ್ರತಾಪ್ ನಿವಾಸ ಖಾಲಿ ಮಾಡುವ ವೇಳೆ ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದ್ದು, ಭೂತ-ಪ್ರೇತಗಳ ಕಾರಣದಿಂದಾಗಿ ತಾವು ಸರ್ಕಾರಿ ಬಂಗಲೆಯನ್ನು ತೊರೆಯುತ್ತಿರುವುದಾಗಿ ತೇಜ್ ಪ್ರತಾಪ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ತೇಜ್ ಪ್ರತಾಪ್, "ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ನಾನು ವಾಸ ಮಾಡುತ್ತಿರುವ ಸರ್ಕಾರಿ ಬಂಗಲೆಯೊಳಗೆ ಭೂತ ಪ್ರೇತಗಳನ್ನು ಛೂ ಬಿಟ್ಟಿದ್ದಾರೆ. ಹೀಗಾಗಿ ನಾನು ನಿವಾಸವನ್ನು ತೆರವುಗೊಳಿಸಲು ನಿರ್ಧರಿಸಿದ್ದೇನೆ ಎಂದು ಅವರು ಆರೋಪಿಸಿದ್ದಾರೆ.