ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಜಗದೀಶ್ ಮಿಶ್ರಾ ತನ್ನ ತಂದೆ ರಾಮ್ದೇವ್ ಮಿಶ್ರಾ ಅವರ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಶನಿವಾರ ನಡೆದ ಘಟನೆಯಲ್ಲಿ ತಂದೆಗೆ ಕೊಡಲಿಯಿಂದ ಹೊಡೆದ ಒಂದೇ ಏಟಿಗೆ ತಂದೆ ಮೃತನಾದನೆಂದು ತಿಳಿದ ಮಗ ಜಗದೀಶ್ ಕೆಲ ಕ್ಷಣಗಳ ಬಳಿಕ ತಂದೆಯ ಚೀರಾಟ ಕೇಳಿ ಭೀತಿಗೊಂಡಿದ್ದಾನೆ. ಆಗ ಮತ್ತೆ ತಾನು ಕೊಟ್ಟ ಏಟಿನಿಂದ ಸೀಳಿದ್ದ ಕುತ್ತಿಗೆ ಭಾಗವನ್ನು ಫೆವಿಕ್ವಿಕ್ ಬಳಸಿ ಅಂಟಿಸುವ ಪ್ರಯತ್ನ ಮಾಡಿದ್ದಾನೆ.