ಪುತ್ರನಿಗೆ ಉದ್ಯಮದಲ್ಲಿ ನೆರವು ನೀಡುವಂತೆ ಚಿದಂಬರಂ ಕೇಳಿದ್ದರು: ಇಂದ್ರಾಣಿ, ಪೀಟರ್ ಮುಖರ್ಜಿ

ಕಾರ್ತಿ ಚಿದಂಬರಂ ಅವರ ಉದ್ಯಮಕ್ಕೆ ಸಹಾಯ ಮಾಡುವಂತೆ ಪಿ. ಚಿದಂಬರಂ ಅವರು ನಮ್ಮನ್ನು ಕೇಳಿದ್ದರು, ಚಿದಂಬರಂ ಅವರ ಮಾತಿನಂತೆಯೇ ನಾವು ಕಾರ್ತಿ ಚಿದಂಬರಂ ಅವರಿಗೆ ಯುಎಸ್'ಡಿ 7 ಬಿಲಿಯನ್'ರಷ್ಟು ಹಣವನ್ನು ನೀಡಿದ್ದೆವು ಎಂದು ಐಎನ್ಎಕ್ಸ್ ಮೀಡಿಯಾ...
ಐಎನ್ಎಕ್ಸ್ ಮೀಡಿಯಾ ಲಿಮಿಟೆಡ್'ನ ನಿರ್ದೇಶಕರಾದ ಪೀಟರ್ ಹಾಗೂ ಇಂದ್ರಾಣಿ ಮುಖರ್ಜಿ
ಐಎನ್ಎಕ್ಸ್ ಮೀಡಿಯಾ ಲಿಮಿಟೆಡ್'ನ ನಿರ್ದೇಶಕರಾದ ಪೀಟರ್ ಹಾಗೂ ಇಂದ್ರಾಣಿ ಮುಖರ್ಜಿ
Updated on
ನವದೆಹಲಿ: ಕಾರ್ತಿ ಚಿದಂಬರಂ ಅವರ ಉದ್ಯಮಕ್ಕೆ ಸಹಾಯ ಮಾಡುವಂತೆ ಪಿ. ಚಿದಂಬರಂ ಅವರು ನಮ್ಮನ್ನು ಕೇಳಿದ್ದರು, ಚಿದಂಬರಂ ಅವರ ಮಾತಿನಂತೆಯೇ ನಾವು ಕಾರ್ತಿ ಚಿದಂಬರಂ ಅವರಿಗೆ ಯುಎಸ್'ಡಿ 7 ಬಿಲಿಯನ್'ರಷ್ಟು ಹಣವನ್ನು ನೀಡಿದ್ದೆವು ಎಂದು ಶೀನಾ ಬೋರಾ ಪ್ರಕರಣದಲ್ಲಿ ಜೈಲು ಸೇರಿರುವ ಐಎನ್ಎಕ್ಸ್ ಮೀಡಿಯಾ ಲಿಮಿಟೆಡ್'ನ ನಿರ್ದೇಶಕರಾದ ಪೀಟರ್ ಹಾಗೂ ಇಂದ್ರಾಣಿ ಮುಖರ್ಜಿಯವರು ಬುಧವಾರ ಹೇಳಿದ್ದಾರೆ. 
ಐಎನ್ಎಕ್ಸ್ ಮೀಡಿಯಾ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದ್ರಾಣಿ ಹಾಗೂ ಪೀಟರ್ ಮುಖರ್ಜಿಯವರ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆ. 
ಇಂದ್ರಾಣಿ ಹಾಗೂ ಪೀಟರ್ ಮುಖರ್ಜಿ ನಡೆಸುತ್ತಿದ್ದ ಮೀಡಿಯಾ ಕಂಪನಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ತೆರಿಗೆ ಇಲಾಖೆ 2007ರಲ್ಲಿ ಹೇಳಿತ್ತು. ಈ ಹಿನ್ನಲೆಯಲ್ಲಿ ಮೀಡಿಯಾ ಕಂಪನಿಗೆ ಅಗತ್ಯವಿದ್ದ ವಿದೇಶಿ ಬಂಡವಾಳಕ್ಕೆ ಹೂಡಿಕೆಗೆ ಅನುಮತಿ ನೀಡುವಂತೆ ಕೋರಿ ನಾರ್ಥ್ ಬ್ಲಾಕ್ ಕಚೇರಿಯಲ್ಲಿ ಅಂದಿನ ವಿತ್ತ ಸಚಿವರಾಗಿದ್ದ ಪಿ. ಚಿದಂಬರಂ ಅವರನ್ನು ಭೇಟಿ ಮಾಡಿದ್ದೆವು. ಈ ವೇಳೆ ತಮ್ಮ ಪುತ್ರ ಕಾರ್ತಿ ಚಿದಂಬರಂ ಅವರ ಉದ್ಯಮಕ್ಕೆ ಸಹಾಯ ಮಾಡುವಂತೆ ಅವರು ತಿಳಿಸಿದ್ದರು ಎಂದು ಹೇಳಿಕೆಯಲ್ಲಿ ಪೀಟರ್ ಹಾಗೂ ಇಂದ್ರಾಣಿ ಮುಖರ್ಜಿ ಹೇಳಿಕೊಂಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com