ಇನ್ನು ಈ ಘಟನೆ ಸಂಬಂಧ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಾಲಿವುಡ್ ಮಂದಿ ಇದನ್ನು ಭಯೋತ್ಪಾದನೆ ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಖ್ಯಾತ ನಟ, ನಿರ್ದೇಶಕ ಫರ್ಹಾನ್ ಅಖ್ತರ್, ಸುಧೀರ್ ಮಿಶ್ರಾ ಮತ್ತು ವಿಶಾಲ್ ದದ್ಲಾನಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳಿದ್ದ ಬಸ್ ಮೇಲೆ ದಾಳಿ ಪ್ರತಿಭಟನೆಯಲ್ಲ... ಅದು ಭಯೋತ್ಪಾದನೆ. ಈ ಕೃತ್ಯದಲ್ಲಿ ಪಾಲ್ಗೊಂಡವರೆಲ್ಲರೂ ಭಯೋತ್ಪಾದಕರು ಎಂದು ಕಿಡಿಕಾರಿದ್ದಾರೆ. ಅಂತೆಯೇ ಖ್ಯಾತನಟ ಪ್ರಕಾಶ್ ರಾಜ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಲ್ಲೊಂದು ಚುನಾಯಿತ ಸರ್ಕಾರವಿದ್ದು, ಪ್ರತಿಪಕ್ಷ ಕೂಡ ಇದೆ. ಹೀಗಿದ್ದೂ ಮಕ್ಕಳ ಮೇಲೆ ದಾಳಿಯಾಗಿದೆ. ನಮ್ಮ ದೇಶದ ಮಕ್ಕಳು ಪ್ರಾಣಭೀತಿಯಲ್ಲಿದ್ದಾರೆ. ನಿಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕೆ ದೇಶದ ಮಕ್ಕಳ ಭದ್ರತೆಯಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.