ಚೆನ್ನೈ: ಮೊಬೈಲ್‍ನಲ್ಲಿ ಮಾತನಾಡುತ್ತ ವಿಮಾನ ನಿಲ್ದಾಣದ ಫ್ಲೈಓವರ್‌ನಿಂದ ಬಿದ್ದು ಬೆಂಗಳೂರು ಟೆಕ್ಕಿ ಸಾವು

ಚೆನ್ನೈನ ವಿಮಾನ ನಿಲ್ದಾಣದ ಫ್ಲೈ ಓವರ್ ನಿಂದ ಆಯಾತಪ್ಪಿ ಕೆಳಗೆ ಬಿದ್ದು ಬೆಂಗಳೂರು ಮೂಲದ ಟೆಕ್ಕಿ ಮೃತಪಟ್ಟಿದ್ದಾನೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ಚೆನ್ನೈನ ವಿಮಾನ ನಿಲ್ದಾಣದ ಫ್ಲೈ ಓವರ್ ನಿಂದ ಆಯಾತಪ್ಪಿ ಕೆಳಗೆ ಬಿದ್ದು ಬೆಂಗಳೂರು ಮೂಲದ ಟೆಕ್ಕಿ ಮೃತಪಟ್ಟಿದ್ದಾನೆ. 
28 ವರ್ಷದ ಚೈತನ್ಯ ವಿಯೂರು ಮೃತ ದುರ್ದೈವಿ. ಟೆಕ್ಕಿ ಸಾವು ಕುರಿತಂತೆ ಸಿಸಿಟಿವಿ ದೃಶ್ಯಗಳನ್ನು ವೀಕ್ಷಿಸಿದಾಗ ಚೈತನ್ಯ ಬೆಳಗ್ಗೆ 6.30ರ ಸುಮಾರಿಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ಫ್ಲೈ ಓವರ್ ನ ತಡೆಗೋಡೆ ಮೇಲೆ ಕುಳಿತುಕೊಳ್ಳಲು ಯತ್ನಿಸಿದಾಗ ಆಯಾತಪ್ಪಿ 10 ಅಡಿ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
ವಿಯೂರು ಆಂಧ್ರಪ್ರದೇಶದ ವಿಜಯವಾಡ ಮೂಲದವರಾಗಿದ್ದು ಬೆಂಗಳೂರಿನ ಅಕ್ಸೆಂಚರ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸದ್ಯ ಪ್ರಕರಣ ಕುರಿತಂತೆ ವಿಯೂರುರು ಸೆಲ್ಫಿ ತೆಗೆದುಕೊಳ್ಳುವಾಗ ಆಯಾತಪ್ಪಿ ಕೆಳಗೆ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದು ಈ ಸಂಬಂಧ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com