

ನವದೆಹಲಿ: ಇಂದಿನ ಅಸ್ಥಿರ ಜಗತ್ತಿನಲ್ಲಿ ಶಾಂತಿ ಮತ್ತು ಸಮೃದ್ಧಿ ಸ್ಥಾಪಿಸುವಲ್ಲಿ ಭಾರತ ಬಹುಮುಖ್ಯವಾದ ಪಾತ್ರವನ್ನು ನಿರ್ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
9 ರಾಷ್ಟ್ರಗಳ ಮುಖ್ಯಸ್ಥರ ಮಿಷನ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಅಸ್ಥಿರ ಜಗತ್ತಿನಲ್ಲಿ ಜಾಗತಿಕ ಸ್ಥಾಪನೆಯಲ್ಲಿ ಭಾರತ ನೆರವು ನೀಡಲಿದೆ ಎಂದರು.
ನರೇಂದ್ರಮೋದಿ ಪ್ರಧಾನಿಯಾದ ನಂತರ ವಿಶ್ವ ಮಟ್ಟದಲ್ಲಿ ಭಾರತದ ವರ್ಚಸ್ಸು ಮಹತ್ವಪೂರ್ಣ ರೀತಿಯಲ್ಲಿ ಬದಲಾಗಿದೆ ಎಂದು ವಿದೇಶಾಂಗ ಖಾತೆ ಸಚಿವ ಸುಷ್ಮಾ ಸ್ವರಾಜ್ ಹೇಳಿದರು.
ಜೂನ್ 30 ರಿಂದ ಆರಂಭವಾಗಿದ್ದ ಮೂರು ದಿನಗಳ ವಾರ್ಷಿಕ ಸಮ್ಮೇಳನದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವರಾದ ಎಂ. ಜಿ. ಅಕ್ಬರ್, ಜನರಲ್ ವಿ. ಕೆ. ಸಿಂಗ್ ಭಾಗವಹಿಸಿದ್ದರು.
Advertisement