ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಾಸ್ವಾನ್ ಅವರ ಕುಟುಂಬಸ್ಥರು, ಪಂಚಾಯತ್ ಸಭೆಗಾಗಿ ಬುಚ್ಛಿ ಎಂಬ ಗ್ರಾಮಕ್ಕೆ ಛೋಟೂ ಗುಪ್ತಾ ಎಂಬ ವ್ಯಕ್ತಿ ಜು.6 ರಂದು ಪಾಸ್ವಾನ್ ಅವರನ್ನು ಕರೆದುಕೊಂಡು ಹೋಗಿದ್ದ. ಇದಾದ ಬಳಿಕ ಪಾಸ್ವಾನ್ ಅವರು ಮತ್ತೆ ಮನೆಗೆ ಹಿಂತಿರುಗಿರಲಿಲ್ಲ. ನಾಪತ್ತೆಯಾದ ಬಳಿಕ ಸಾಕಷ್ಟು ಹುಡುಕಾಟ ನಡೆಸಲಾಯಿತು. ಆದರೆ, ಎಲ್ಲಿಯೂ ಪತ್ತೆಯಾಗಿರಲಿಲ್ಲ. ನಂತರ ಪಾಸ್ವಾನ್ ಅವರ ಪುತ್ರ ಸಂಜಯ್ ಛೋಟು ಗುಪ್ತಾ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದ ಎಂದು ಹೇಳಿದ್ದಾರೆ.