ಪಾಟ್ನಾ: ರಾಜಕಾರಣಿಗಳು ದಲಿತರ ಮನೆಗಳಿಗೆ ತೆರಳಿ ಊಟ, ತಿಂಡಿ ನಿದ್ರೆ ಮಾಡುವುದು ಸಾಮಾನ್ಯ. ಆದರೆ ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಪುತ್ರ, ಮಾಜಿ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ದಲಿತರ ಮನೆಯಲ್ಲಿ ಸ್ನಾನ ಮಾಡಿದ್ದಾರೆ.
ತೇಜ್ ಪ್ರತಾಪ್ ಪ್ರತಿನಿಧಿಸುತ್ತಿರುವ ಮಹುವಾದ ಕರ್ಹಾತಿಯಾ ಪಂಚಾಯತ್ ಪ್ರದೇಶದ ದಲಿತರ ಮನೆಗೆ ತೆರಳಿ ಮನೆ ಎದುರು ಇರುವ ಕೊಳವೆಬಾವಿಯಿಂದ ನೀರೆತ್ತಿ ನೂರಾರು ಜನರ ಎದುರೇ ಸ್ನಾನ ಮಾಡಿದರು.
ಟ್ವೀಟರ್ನಲ್ಲಿ ಸ್ನಾನ ಮಾಡಿರುವ ಭಾವಚಿತ್ರಗಳನ್ನು ಪ್ರಕಟಿಸಿರುವ ತೇಜ್ ಪ್ರತಾಪ್ ವಿಧಾನಸಭಾ ಕ್ಷೇತ್ರದಲ್ಲಿ ದಿನವಿಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದೆ. ದಣಿದಿದ್ದ ನಾನು ತಣ್ಣೀರಿನಲ್ಲಿ ಸ್ನಾನ ಮಾಡಿದೆ, ಇದೊಂದು ಸಿಹಿಯಾದ ಅನುಭವ ಎಂದು ಹೇಳಿಕೊಂಡಿದ್ದಾರೆ.
ತೇಜ್ ಪ್ರತಾಪ್ ಟ್ವಿಟ್ಟರ್ ಫೋಟೋವನ್ನು ಬಿಹಾರ ಮಾಡಿ ಡಿಸಿಎಂ ತೇಜಸ್ವಿ ಯಾದವ್ ರೀಟ್ವೀಟ್ ಮಾಡಿ ನಮ್ಮಿಬ್ಬರ ನಡುವೆ ಯಾವುದೇ ಜಗಳವಿಲ್ಲ ಎಂಬ ಸುಳ್ಳು ಸುದ್ದಿಗೆ ತೆರೆ ಎಳೆದಿದ್ದಾರೆ.
सत्तू पार्टी कार्यक्रम और अपने विस क्षेत्र महुआ में दिनभर के पैदल भ्रमण के बाद थोड़ी थकावट को दूर करने के लिए करहटिया पंचायत के एक दलित के घर जा कर उनके चापाकल पर स्नान किया।