ತೇಜ್ ಪ್ರತಾಪ್ ಯಾದವ್
ತೇಜ್ ಪ್ರತಾಪ್ ಯಾದವ್

ದಲಿತರ ಮನೆಯಲ್ಲಿ ಲಾಲು ಪುತ್ರನ ಸ್ನಾನ: ಟ್ವಿಟ್ಟರ್ ನಲ್ಲಿ ಫೋಟೋ ಪ್ರಕಟಿಸಿದ ತೇಜ್ ಪ್ರತಾಪ್

ರಾಜಕಾರಣಿಗಳು ದಲಿತರ ಮನೆಗಳಿಗೆ ತೆರಳಿ ಊಟ, ತಿಂಡಿ ನಿದ್ರೆ ಮಾಡುವುದು ಸಾಮಾನ್ಯ. ಆದರೆ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಪುತ್ರ, ...
Published on
ಪಾಟ್ನಾ: ರಾಜಕಾರಣಿಗಳು ದಲಿತರ ಮನೆಗಳಿಗೆ ತೆರಳಿ ಊಟ, ತಿಂಡಿ ನಿದ್ರೆ ಮಾಡುವುದು ಸಾಮಾನ್ಯ. ಆದರೆ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಪುತ್ರ, ಮಾಜಿ ಆರೋಗ್ಯ ಸಚಿವ ತೇಜ್‌ ಪ್ರತಾಪ್‌ ಯಾದವ್‌ ದಲಿತರ ಮನೆಯಲ್ಲಿ ಸ್ನಾನ ಮಾಡಿದ್ದಾರೆ.
ತೇಜ್‌ ಪ್ರತಾಪ್‌ ಪ್ರತಿನಿಧಿಸುತ್ತಿರುವ ಮಹುವಾದ ಕರ್‌ಹಾತಿಯಾ ಪಂಚಾಯತ್‌ ಪ್ರದೇಶದ ದಲಿತರ ಮನೆಗೆ ತೆರಳಿ ಮನೆ ಎದುರು ಇರುವ ಕೊಳವೆಬಾವಿಯಿಂದ ನೀರೆತ್ತಿ  ನೂರಾರು ಜನರ ಎದುರೇ ಸ್ನಾನ ಮಾಡಿದರು. 
ಟ್ವೀಟರ್‌ನಲ್ಲಿ ಸ್ನಾನ ಮಾಡಿರುವ ಭಾವಚಿತ್ರಗಳನ್ನು ಪ್ರಕಟಿಸಿರುವ ತೇಜ್‌ ಪ್ರತಾಪ್‌ ವಿಧಾನಸಭಾ ಕ್ಷೇತ್ರದಲ್ಲಿ ದಿನವಿಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದೆ. ದಣಿದಿದ್ದ ನಾನು ತಣ್ಣೀರಿನಲ್ಲಿ ಸ್ನಾನ ಮಾಡಿದೆ, ಇದೊಂದು ಸಿಹಿಯಾದ ಅನುಭವ ಎಂದು ಹೇಳಿಕೊಂಡಿದ್ದಾರೆ. 
ತೇಜ್ ಪ್ರತಾಪ್ ಟ್ವಿಟ್ಟರ್ ಫೋಟೋವನ್ನು ಬಿಹಾರ ಮಾಡಿ ಡಿಸಿಎಂ ತೇಜಸ್ವಿ ಯಾದವ್ ರೀಟ್ವೀಟ್ ಮಾಡಿ ನಮ್ಮಿಬ್ಬರ ನಡುವೆ ಯಾವುದೇ ಜಗಳವಿಲ್ಲ ಎಂಬ ಸುಳ್ಳು ಸುದ್ದಿಗೆ ತೆರೆ ಎಳೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com