ಅವಿಭಜಿತ ಆಂಧ್ರದ ಕೊನೆಯ ಮುಖ್ಯಮಂತ್ರಿಯಾಗಿದ್ದ ಕಿರಣ್ ಕುಮಾರ್ ರೆಡ್ಡಿ ಕಾಂಗ್ರೆಸ್ ನಿಂದ ಹೊರಬಂದ ನಂತರ ಜೈ ಸಮೈಕ್ಯ ಆಂಧ್ರ ಎಂಬ ಪಕ್ಷ ಸ್ಥಾಪಿಸಿ 2014 ರ ಲೋಕಸಭಾ ಚುನಾವಣೆ ಎದುರಿಸಿದ್ದರು. ಆದರೆ ನಾಲ್ಕು ವರ್ಷಗಳ ಬಳಿಕ ಕಿರಣ್ ರೆಡ್ಡಿ ಕಾಂಗ್ರೆಸ್ ಗೆ ವಾಪಸ್ಸಾಗಿದ್ದು, ಕೇರಳದ ಮಾಜಿ ಸಿಎಂ ಹಾಗೂ ಆಂಧ್ರ ಕಾಂಗ್ರೆಸ್ ಉಸ್ತುವಾರಿ ಉಮ್ಮನ್ ಚಾಂಡಿ ಎಪಿಸಿಸಿ ಅಧ್ಯಕ್ಷ ಎನ್ ರಘುವೀರ ರೆಡ್ಡಿ ಹಾಗೂ ಪಕ್ಷದ ನಾಯಕ ರಣ್ದೀಪ್ ಸುರ್ಜೆವಾಲ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.