ಬಹುಮತ ಗಳಿಸುತ್ತಿದ್ದಂತೆಯೇ ಇಮ್ರಾನ್ ಖಾನ್ ಭಾರತದೊಂದಿಗೆ ಉತ್ತಮ ಬಾಂಧವ್ಯ ಬೆಸೆಯುವುದು ಹಾಗೂ ಕಾಶ್ಮೀರದ ವಿಷಯವಾಗಿ ಮಾತನಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಓಮರ್ ಅಬ್ದುಲ್ಲಾ, ಇಮ್ರಾನ್ ಖಾನ್ ಇನ್ನೂ ಪ್ರಮಾಣ ವಚನ ಸ್ವೀಕರಿಸಬೇಕಿದೆ. ಇಮ್ರಾನ್ ಖಾನ್ ಅವರ ಹೇಳಿಕೆ ಚೆನ್ನಾಗಿದೆ. ಆದರೆ ಅವರ ಕೆಲಸಗಳು ಅವರ ಹೇಳಿಕೆಯನ್ನು ನಿರ್ಧರಿಸುತ್ತವೆ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ.