ಪ್ರತೀನಿತ್ಯ ಸಾವಿರಾರು ಭಕ್ತಾದಿಗಳು ಭೇಟಿ ನೀಡುವ ವೈಷ್ಣೇ ದೇವಿ ದೇಗುಲದಲ್ಲಿ ಭದ್ರತೆಗಾಗಿ ಸಿಆರ್'ಪಿಎಫ್ ಹರ್ವಿಂದರ್ ಸಿಂಗ್ ಅವರನ್ನು ನಿಯೋಜಿಸಲಾಗಿತ್ತು. ಈ ವೇಳೆ ಕೆಲ ಮಹಿಳೆ ಮತ್ತು ಮಕ್ಕಳು ಭೂಕುಸಿತದಿಂದ ಕಲ್ಲು ಮಣ್ಣುಗಳಲ್ಲಿ ಸಿಲುಕಿರುವುದನ್ನು ಕಂಡ ಸಿಂಗ್ ಅವರು ರಕ್ಷಣೆಗೆ ಧಾವಿಸಿದ್ದರು. ಕಾರ್ಯಾಚರಣೆ ವೇಳೆ ಬಂಡೆಯೊಂದು ಸಿಂಗ್ ಅವರ ತಲೆಗೆ ಅಪ್ಪಳಿಸಿ ಸಿಂಗ್ ಅವರು ಹುತಾತ್ಮರಾಗಿದ್ದರು. ಘಟನೆಯಲ್ಲಿ ವೀರ ಹಾಗೂ ಸ್ವತ್ಯಾಗ ಮೆರೆದ ಯೋಧನಿಗೆ ಇದೀಗ ಸರ್ಕಾರ ಗೌರವಿಸಿದೆ.