ದೇಶದಲ್ಲಿಂದು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಸಂವಿಧಾನವನ್ನು ಹಾಸ್ಯಸ್ಪದವನ್ನಾಗಿ ಮಾಡಲಾಗಿದೆ. ಸರ್ಕಾರದ ಎಲ್ಲಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಎಲ್ಲವೂ ಬಿಜೆಪಿ ನಿರ್ದೇಶನದಂತೆಯೇ ನಡೆಯುತ್ತಿದೆ. ಇತರರ ವಿರುದ್ಧ ತನಿಖೆಗೆ ಆದೇಶಿಸುವ ಸರ್ಕಾರ, ಸರ್ಕಾರದಲ್ಲಿ ಉನ್ನತ ಮಟ್ಟದಲ್ಲಿರುವ ಅಧಿಕಾರಿಗಳ ವಿರುದ್ಧ ಮಾತ್ರ ತನಿಖೆಗೆ ಆದೇಶಿಸುತ್ತಿಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷ ಬ್ಯಾಂಕ್ ವೊಂದರ ನಿರ್ದೇಶಕರಾಗಿದ್ದಾರೆ. ನೋಟು ನಿಷೇಧವಾದ ಬ್ಯಾಂಕ್ ನಲ್ಲಿ ರೂ.745.59 ಕೋಟಿ ಮೌಲ್ಯದ ಹಳೆ ನೋಟು ಠೇವಣಿಯಾಗಿದ್ದು, ಇದರ ಬಗ್ಗೆ ಯಾರು ತನಿಖೆಗೆ ಆದೇಶಿಸುತ್ತಾರೆ?...