ಲೆನಿನ್ ಅವರ ಎಲ್ಲಾ ಪ್ರತಿಮೆಗಳನ್ನು ಧ್ವಂಸಗೊಳಿಸಬೇಕು; ಬಿಜೆಪಿ ಶಾಸಕ

ಭಾರತದಲ್ಲಿರುವ ರಷ್ಯಾ ಕಮ್ಯುನಿಸ್ಟ್ ನಾಯಕ ವ್ಲಾದಿಮಿರ್ ಲೆನಿನ್ ಅವರ ಎಲ್ಲಾ ಪ್ರತಿಮೆಗಳನ್ನು ಧ್ವಂಸಗೊಳಿಸಬೇಕೆಂದು ಬಿಜೆಪಿ ಶಾಸಕರೊಬ್ಬರು ಗುರುವಾರ ಹೇಳಿದ್ದಾರೆ...
ಬಿಜೆಪಿ ಶಾಸಕ ರಾಜ್ ಪುರೋಹಿತ್
ಬಿಜೆಪಿ ಶಾಸಕ ರಾಜ್ ಪುರೋಹಿತ್
ಮುಂಬೈ: ಭಾರತದಲ್ಲಿರುವ ರಷ್ಯಾ ಕಮ್ಯುನಿಸ್ಟ್ ನಾಯಕ ವ್ಲಾದಿಮಿರ್ ಲೆನಿನ್ ಅವರ ಎಲ್ಲಾ ಪ್ರತಿಮೆಗಳನ್ನು ಧ್ವಂಸಗೊಳಿಸಬೇಕೆಂದು ಮಹಾರಾಷ್ಟ್ರದ ಬಿಜೆಪಿ ಶಾಸಕರೊಬ್ಬರು ಗುರುವಾರ ಹೇಳಿದ್ದಾರೆ. 
ತ್ರಿಪುರದಲ್ಲಿ ಲೆನಿನ್ ಅವರ ಪ್ರತಿಮೆಗಳನ್ನು ಧ್ವಂಸಗೊಳಿಸಿರುವುದನ್ನು ನಾನು ಸ್ವಾಗತಿಸುತ್ತೇನೆ. ದೇಶದಲ್ಲಿರುವ ಲೆನಿನ್ ಅವರ ಎಲ್ಲಾ ಪ್ರತಿಮೆಗಳನ್ನೂ ನಾಶಪಡಿಸಬೇಕೆಂದು ಬಿಜೆಪಿ ಶಾಸಕ ರಾಜ್ ಪುರೋಹಿತ್ ಅವರು ಹೇಳಿದ್ದಾರೆ. 
ಲೆನಿನ್ ಅವರ ಪ್ರತಿಮೆ ನಾಶಪಡಿಸಿರುವುದಕ್ಕೆನನಗೆ ಬಹಳ ಸಂತೋಷವಾಗುತ್ತಿದೆ. ಅಧಿಕಾರದ ಆಸೆಯಿಂದಾಗಿ ತ್ರಿಪುರಾದಲ್ಲಿ ಲೆನಿನ್ ಅವರ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿತ್ತು. ಭಾರತಕ್ಕೆ ಲೆನಿನ್ ಅವರು ನೀಡುರುವ ಕೊಡುಗೆಯಾದರೂ ಏನು? ಲೆನಿನ್ ಪ್ರತಿಮೆ ಅವಮಾನದ ಸಂಕೇತವಾಗಿದ್ದು, ಅವರ ಎಲ್ಲಾ ಪ್ರತಿಮೆಗಳನ್ನು ಧ್ವಂಸಗೊಳಿಸಬೇಕು. ರಷ್ಯಾದ ಕಮ್ಯುನಿಸ್ಟ್ ನಾಯಕ ಹಲವಾರು ಜನರನ್ನು ಹತ್ಯೆ ಮಾಡಿದ್ದು. ಆತನನ್ನು ಭಾರತದ ಅಹಿಂಸೆ ಹಾಗೂ ಮಾನವೀಯತೆಯ ಸಿದ್ಧಾಂತದೊಂದಿಗೆ ಹೋಲಿಕೆ ಮಾಡಬಾರದು. ಆತ ಎಂದಿಗೂ ತನ್ನ ಆಡಲಿತದಲ್ಲಿ ಸಮಾನತೆಯನ್ನು ನೀಡಿರಲಿಲ್ಲ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಆರ್'ಎಸ್ಎಸ್'ನ್ನು ಕೊಂಡಾಡಿರುವ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಿದ್ಧಾಂತಗಳು ಭಾರತಕ್ಕೆ ಉತ್ತಮವಾದದ್ದು. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ಪ್ರತೀಯೊಬ್ಬ ವ್ಯಕ್ತಿಯನ್ನೂ ಸಮಾನತೆಯಿಂದ ನೋಡಿದ್ದರು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com