ಪ್ರಕರಣ ಸಂಬಂಧ ಇದೀಗ ಹೇಳಿಕೆ ನೀಡಿರುವ ಭುವನೇಶ್ವರದ ಪೊಲೀಸ್ ಆಯುಕ್ತ ಯೋಗೇಶ್ ಬಹದ್ದೂರ್ ಖುರಾನಿಯಾ ಅವರು, ವಿಡಿಯೋ ಕುರಿತಂತೆ ರವೀನಾ ಟಂಡನ್ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ಕಾನೂನುಗಳಿಲ್ಲ. ಶಿವರಾತ್ರಿ ಸಂದರ್ಭದಲ್ಲಿ ಲಿಂಗರಾಜ ದೇಗುಲಕ್ಕೆ ಹಲವಾರು ಭಕ್ತಾದಿಗಳು ಬರುತ್ತಾರೆ. ಈ ವೇಳೆ ಹಲವರು ಫೋಟೋಗಳು ಹಾಗೂ ವಿಡಿಯೋಗಳನ್ನು ಬಹಿರಂಗವಾಗಿಯೇ ಮಾಡುತ್ತಿರುತ್ತಾರೆ. ಹಲವು ಸುದ್ದಿ ವಾಹಿನಿಗಳೂ ಕೂಡ ಇದನ್ನು ನೇರ ಪ್ರಸಾರ ಮಾಡುತ್ತಿರುತ್ತವೆ. ಈ ಪ್ರಕರಣದಲ್ಲಿ ದೇಗುಲದ ಆಡಳಿತ ಮಂಡಳಿ ದೂರು ನೀಡಿದೆ. ಯಾವುದೇ ಕಾನೂನುಗಳಿಲ್ಲದಿರುವುದರಿಂದ ನಟಿ ರವೀನಾ ಟಂಡನ್ ಅಥವಾ ಇನ್ನಾವುದೇ ವ್ಯಕ್ತಿಯ ವಿರುದ್ಧ ನಾವು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.