ಇನ್ನು ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಬಿಜೆಪಿ ಅತೀ ದೊಡ್ಡ ಅಡ್ಡಗಾಲಾಗಿ ಪರಿಣಮಿಸಿದ್ದು, ಎಸ್ ಪಿ-ಬಿಎಸ್ ಪಿ ಮೈತ್ರಿ. ಹೌದು..ಕಳೆದ 23 ವರ್ಷಗಳಿಂದ ಬದ್ಧ ವೈರಿಗಳಾಗಿದ್ದ ಬಿಎಸ್ ಪಿ ಮತ್ತು ಎಸ್ ಪಿ, ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಪರಸ್ಪರ ಸ್ನೇಹದ ಹಸ್ತ ಚಾಚಿದ್ದವು. ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಮತದಾನಕ್ಕೆ ಕೇವಲ 10 ದಿನ ಬಾಕಿ ಇರುವಂತೆ ತಾವು ತಮ್ಮ ಪಕ್ಷದಿಂದ ಯಾವುದೇ ಅಭ್ಯರ್ಥಿಯನ್ನೂ ಕಣಕ್ಕಿಳಿಸುವುದಿಲ್ಲ. ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಜಾತ್ಯಾತೀತ ಅಭ್ಯರ್ಥಿಗಳಿಗೆ ಮತ ನೀಡಬೇಕಿದೆ ಎಂದು ಹೇಳಿದ್ದರು. ಮಾಯಾವತಿ ಅವರು ಎಲ್ಲಿಯೂ ಎಸ್ ಪಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಿಲಸಿ ಎಂದು ಹೇಳಿಲ್ಲವಾದರೂ ನೇರವಾಗಿ ಬಿಎಸ್ ಪಿ ಕಾರ್ಯಕರ್ತರ ಮತಗಳು ಎಸ್ ಪಿಗೆ ಬೀಳುವಂತೆ ಮಾಯಾವತಿ ಹೇಳಿಕೆ ನೀಡಿದ್ದರು. ಇದು ಎಸ್ ಪಿಗೆ ಆನೆ ಬಲ ತಂದು ಕೊಟ್ಟು, ಗೋರಖ್ ಪುರ ಹಾಗೂ ಫುಲ್ಪುರ ಕ್ಷೇತ್ರಗಳಲ್ಲಿ ಎಸ್ ಪಿ ಪ್ರಚಂಡ ಜಯ ಸಾಧಿಸುವಂತೆ ಮಾಡಿತು. ಬಿಎಸ್ ಪಿ ಮತಗಳು ಬಿಜೆಪಿಗೆ ವಿರುದ್ಧ ಅಂದರೆ ಎಸ್ ಪಿ ಪಾಲಾಗಿದ್ದವು.