ಅಣೆಕಟ್ಟು, ಕಾರ್ಖಾನೆಗಳು ಮತ್ತು ರಸ್ತೆಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶ ಮಾಡುತ್ತಿರುವುದನ್ನು ವಿರೋಧಿಸಿದ್ದ ಖ್ಯಾತ ಪರಿಸರ ಹೋರಾಟಗಾರ ಸುಂದರಲಾಲ್ ಬಹುಗುಣ ಅವರ ನೇತೃತ್ದಲ್ಲಿ 1973ರಲ್ಲಿ ಉತ್ತರ ಪ್ರದೇಶದಲ್ಲಿ ಚಿಪ್ಕೋ ಚಳುವಳಿಯನ್ನು ಆರಂಭಿಸಲಾಯಿತು. ಈ ಚಳುವಳಿಯಲ್ಲಿ ಹೋರಾಟಗಾರರು ಪರಸ್ಪರರ ಕೈ ಹಿಡಿದು ಮರವನ್ನು ಅಪ್ಪಿ ನಿಲ್ಲುತ್ತಿದ್ದರು. ಜತೆಗೆ 1730ರಲ್ಲಿ ರಾಜಸ್ಥಾನದಲ್ಲಿ ನಡೆದ ಚಳುವಳಿಯಿಂದ ಚಿಪ್ಕೋ ಚಳುವಳಿ ಪ್ರೇರಿತವಾಗಿತ್ತು ಎನ್ನಲಾಗಿದೆ.