ಮಾರ್ಚ್ 26 ರಂದು ಕೂಡ ಅಪಹರಣಕಾರರು ಆಯುಷ್ ತಂದೆಗೆ ಮತ್ತೊಂದು ಸಂದೇಶವನ್ನು ಕಳುಹಿಸಿದ್ದು, ಉತ್ತಮ್ ನಗರ ಪ್ರದೇಶದ ಬಳಿ ಹಣವನ್ನು ತೆಗೆದುಕೊಂಡು ಬರುವಂತೆ ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ನಾಗರೀಕ ವಸ್ತ್ರ ಧರಿಸಿದ 30 ಪೊಲೀಸರ ತಂಡವನ್ನು ಸ್ಥಳದಲ್ಲಿ ನಿಯೋಜಿಸಿದ್ದಾರೆ. ಈ ವೇಳೆ ಹಣವನ್ನು ತೆಗೆದುಕೊಂಡು ಹೋಗಲು ಬಂದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಅಪಹರಣಕಾರ ಹಣವನ್ನು ತೆಗೆದುಕೊಂಡು ಹೋಗಲು ಬಂದಿಲ್ಲ.